ಬಿಡದೆ ಬೀಳುತ್ತಿದ್ದ ಜಿನುಗು ಮಳೆಯನ್ನೂ ಲೆಕ್ಕಿಸದೆ ಕಟ್ಟೆಮನೆಯ ಕಾಳೇಗೌಡರ ಮನೆಯ ಆಳು ಚೆನ್ನಿ ಕಂಬಳಿಯ ಹೊದ್ದು ಬಿರಬಿರನೆ ಹೆಜ್ಜೆ ಹಾಕುತ್ತಿದ್ದಳು. ಮಲೆನಾಡಿನಲ್ಲಿ ಹುಟ್ಟಿ ಮೈ ಬಗ್ಗಿಸಿ ದುಡಿದು ಬೆಳೆದಿದ್ದ ಚೆನ್ನಿಯಂಥ ಹೆಣ್ಣಿಗೆ ಆ ಜಿನುಗುಮಳೆ ಎಂಥ ಮಹಾ ಅಡ್ಡಿ! ಅವಳು ಈಗಿರುವ ಸಂದರ್ಭದಲ್ಲಿ ಆ ಜಿನುಗು ಮಳೆ ಒಂದು ರೀತಿಯ ಸಮಾಧಾನವನ್ನೇ ತಂದಿತ್ತು. ಏಕೆಂದರೆ, ದಾರಿಯಲ್ಲಿ ಸಿಗುವ ಜನರಿಗೆ ಚೆನ್ನಿಯ ಕಣ್ಣಲ್ಲಿ ಜಿನುಗುತ್ತಿರುವ ನೀರು ಮಳೆಯಿಂದ ಸಿಡಿದಿದ್ದ ನೀರಿನಲ್ಲಿ ಬೆರೆತು ಹೋಗಿ ಕಾಣದಾಗಿತ್ತು. ದೂರದಲ್ಲಿ ತನ್ನ ಪ್ರಾಣಸಖಿ ದ್ಯಾವಮ್ಮಳ ಗುಡಿಸಲು ಕಂಡಿತು. ಕಂಡಂತೆಯೆ ಅವಳು ನಡೆಯುವ ವೇಗ ಹೆಚ್ಚಿತು. ದ್ಯಾವಮ್ಮನ ಗುಡಿಸಲ ಬಾಗಿಲು ಹಾಕಿರುವುದ ಕಂಡು ಅವಳಿಗೆ ತುಸು ಗಾಬರಿಯಾಗಿ ವೇಗ ಇನ್ನೂ ಹೆಚ್ಚಿತು. ಗುಡಿಸಲ ಹತ್ತಿರ ಬಂದು ನೋಡಲು ಜಡಿದ ಬೀಗ ನೋಡಿ ಒಂದು ಕ್ಷಣ ಅವಕ್ಕಾದಳು. ಏನೂ ತೋಚದೆ ಗುಡಿಸಲ ಮುಂದಿನ ಕಟ್ಟೆಯ ಮೇಲೆ ಕಂಬಳಿ ಹಾಸಿ ಕುಳಿತಳು. ಬಾಯಿಯ ಮೇಲೆ ಕೈ ಒತ್ತಿ ಬರುತ್ತಿದ್ದ ಅಳುವನ್ನು ತಡೆಗಟ್ಟುವ ವಿಫಲ ಪ್ರಯತ್ನ ಮಾಡಿದಳು.
ಚೆನ್ನಿ ಕಟ್ಟೆಮನೆ ಸಿದ್ದಪ್ಪನ ಮಗಳು. ಕಾಳೇಗೌಡನಲ್ಲಿ ಜೀತ ಮಾಡಿಕೊಂಡಿದ್ದ ಸಿದ್ದಪ್ಪ ಸತ್ತು ನಾಲ್ಕಾರು ವರ್ಷಗಳೇ ಕಳೆದಿದ್ದವು. ವಂಶಪಾರಂಪರ್ಯ ಜೀತ ಪದ್ಧತಿಯಿದ್ದ ಕಾಲವದು. ಕೆಳವರ್ಗಕ್ಕೆ ಸೇರಿದ ಅಮಾಯಕ ಬಡವರು ತುತ್ತು ಅನ್ನಕ್ಕೆ ಮತ್ತು ಗೇಣು ಬಟ್ಟೆಗಾಗಿ ತಮ್ಮನ್ನು ತಾವೇ ಕಾಳೇಗೌಡನಂಥ ಕ್ರೂರ ಜಮೀನ್ದಾರರುಗಳಿಗೆ ಮಾರಿಕೊಳ್ಳದೆ ಬೇರೆ ದಾರಿಯೇ ಇರಲಿಲ್ಲ. ಅವಳ ತಂದೆಯ ನಂತರ ತಾನೂ ಜೀತವೆಂಬ ಭೂತದ ಬಾಯಲ್ಲಿ ಬಿದ್ದಳು. ಸುಮಾರು ಇಪ್ಪತ್ತೆಂಟರ ಹರೆಯದ ಆಕೆ ಗಂಡನನ್ನು ಮದುವೆಯಾದ ಹೊಸದರಲ್ಲೇ ಕಳೆದುಕೊಂಡ ನತದೃಷ್ಟೆಯಾಗಿದ್ದಳು. ಇಷ್ಟೆಲ್ಲ ಆದಮೇಲೂ ವಿಧಿಯು ತನ್ನ ಆಟ ಮುಗಿಸಿದ್ದಿಲ್ಲ.
ದ್ಯಾವಮ್ಮನ ಗುಡಿಸಲು ಕಟ್ಟೆಮನೆಯಿಂದ ತುಸು ದೂರ ಗುಳೇಬೆಟ್ಟದ ತಪ್ಪಲಲ್ಲಿತ್ತು. ಗುಡಿಸಲಿನ ಮುಂದೆ ನಿಂತು ನೋಡಿದರೆ ಕಾಳೇಗೌಡರ ಶ್ರೀಮಂತಿಕೆಯ ಕಿರುಪರಿಚಯವಾಗುತ್ತಿತ್ತು. ದೃಷ್ಟಿ ಹೋದಲ್ಲೆಲ್ಲ ಅವರ ಜಮೀನು ತೋಟಗಳೇ ಕಾಣುತ್ತಿದ್ದವು. ಕಾಳೇಗೌಡನ ದಿಮಾಕು ದೌರ್ಜನ್ಯಗಳಿಗೆ ಮೂಕಸಾಕ್ಷಿಯಾಗಿ ಕಟ್ಟೆಮನೆ ಸಾವಿರಾರು ಮೌನ ವೇದನೆಗಳನ್ನು ತನ್ನೊಳಗೆ ಹುದುಗಿಸಿಟ್ಟುಕೊಂಡು ನಿಂತಂತೆ ತೋರುತ್ತಿತ್ತು. ಗುಡಿಸಲಿನ ಹಿಂದೆ ಗುಳೇಬೆಟ್ಟದ ಘೋರಾರಣ್ಯ ಅಲ್ಲಿನ ಬಡ ಜನರ ಕಾರ್ಪಣ್ಯಗಳನ್ನು ನೋಡುತ್ತ ಕ್ರೌರ್ಯನಗೆ ನಗುವಂತೆ ತೋರುತ್ತಿತ್ತು. ಇಷ್ಟೆಲ್ಲ ಪಾತಕಗಳ ನಡುವೆಯೂ ಪ್ರಕೃತಿಯನ್ನು ಸವಿಯುವ ಯಾವುದಾದರೂ ನಿರ್ಲಿಪ್ತ ಜೀವವಿದ್ದರೆ, ಅದಕ್ಕೆ ಸುಂದರ ರಸದೌತನವೇ ಸಿಗುತ್ತಿತ್ತು. ಎಲ್ಲಿ ನೋಡಿದರೂ ಕಣ್ಣಿಗುಜ್ಜುವ ಹಸಿರು, ಹಕ್ಕಿಗಳ ಗಾನಮಾಧುರ್ಯ, ಜಿನುಗು ಮಳೆಯಿಂದಾದ ಮಣ್ಣಿನ ಸಿಹಿಗಂಪು ಸರ್ವೇಂದ್ರಿಯಗಳನ್ನೂ ತಣಿಸುತ್ತಿದ್ದವು. ಇದ್ಯಾವುದರ ಪರಿವೆಯೂ ಇಲ್ಲದೆ, ದುಃಖದಲ್ಲಿ ಮುಳುಗಿದ್ದಳು ಚೆನ್ನಿ, ದ್ಯಾವಮ್ಮನ ಗುಡಿಸಲಿನ ಕಟ್ಟೆಯ ಮೇಲೆ. ಅದೃಷ್ಟವಶಾತ್ ದ್ಯಾವಮ್ಮ ತನ್ನ ಗುಡಿಸಲಿನ ಹತ್ತಿರ ಬಂದಳು. ತನ್ನ ಗೆಳತಿ ಅಳುತ್ತಿರುವುದನ್ನು ಕಂಡು ಗಾಬರಿಯಾಗಿ ಕೇಳಿದಳು.
"ಏನಾಯಿತೆ ಚೆನ್ನಿ? ಯಾಕೆ ಅಳ್ತಾ ಇದ್ದಿ? ಬಾ ಒಳಿಕ್ ಹೋಗಣ ಮದ್ಲು. ಶೀತ ಬಂದಾತು."
ಇಬ್ಬರೂ ಒಳಗೆ ಹೋದರು.
"ಏನಾಯ್ತು ಚೆನ್ನಿ?"
"ನಿಂಗ್ ಗೊತ್ತಿಲ್ದೇ ಇರೋದು ಎನೈತೆ ದ್ಯಾವಿ?"
"ಆ ಸೂಳೇ ಮಗ ಮಂಜಾನಾ?"
"ಹೂ.. ಒಂದೇ ಸಮ ಪೀಡಸ್ತಾನೆ." ಬಿಕ್ಕಿ ಬಿಕ್ಕಿ ಅಳತೊಡಗಿದಳು ಚೆನ್ನಿ.
"ಏನ್ ಮಾಡ್ಲಿ ತಿಳಿತಿಲ್ಲೇ."
"ಅವ್ನ್ ಹೆಣಾ ಎತ್ತ. ಥೂ. ಯಾಕ್ ಬೇಕಂತೆ ಅವ್ನಿಗೆ ಈ ವಯಸ್ಸಲ್ಲಿ ಇದೆಲ್ಲ?"
"ಗೌಡ್ರೂ, ಅವ್ನ ಸೇರ್ಕೊ ಅಂತ ಹೇಳ್ತಾರಲ್ಲೇ"
"ಹೇಳ್ತಾನೆ ಹೇಳ್ತಾನೆ. ಅವ ನಿಂಗೊಂದು ಮಗಿ ಕೊಟ್ರೆ, ದುಡಿಯಕ್ಕೊಂದು ಆಳು ಸಿಕ್ಕ್ತದಲ್ಲ ಹೇಳ್ದೆ ಇನ್ನೇನ್ ಮಾಡ್ಯಾನು. ವಯಸ್ಸಿನ ಹೆಣ್ಣು ನೋಡಕ್ ಪಸಂದಾಗಿದಿಯ. ಗೋವಿಂದಯ್ಯನ ಥರ ಅವನೇ ನಿನ್ನ ಮಲಗಾಕೆ ಕರದ್ರೂ ಕರದನೆ ಕೇಳು. ಜಾತಿಗೀತಿ ನೋಡ್ದೆ."
"ಯಾರೇ ಅದು ಗೋವಿಂದಯ್ಯ? ಯಾರನ್ ಎನ್ ಮಾಡಿದ್ನೆ ಅವ್ನು?"
"ನಿಂಗೊತ್ತಿಲ್ವಾ? ಗೋಳಿಹಿತ್ಳು ಗೋವಿಂದಯ್ಯ? ಐನೋರ್ ಮಗಾ ಕಣೆ, ಗಂಗಿನ ಇಟ್ಕೊಂಡೌನಂತೆ"
ಚೆನ್ನಿಗೆ ಸಿಡಿಲು ಬಡಿದಂತಾಯಿತು. ಅವಳ ದುಃಖ ತಾತ್ಕಾಲಿಕವಾದರೂ ಸ್ವಲ್ಪ ಕಡಿಮೆಯಾಗಿ ಅದರ ಜಾಗವನ್ನು ಆಶ್ಚರ್ಯ ತೆಗೆದುಕೊಂಡಿತು.
"ನಮ್ ಗಂಗೇನಾ?"
"ಹೂ ಕಣೆ ನಿನ್ ಗಂಗೀನೆ. ಅವಳ ಗಂಡ ಸೀನ ಐನೋರಿಗೆ ಬಂದ ದೊಡ್ ಜ್ವರ ಬಂದು ಸತ್ತ. ಆಮೇಲೆ ಸಣ್ಣ ಐನೋರು ಭಾಳ ಸಾಯ ಮಾಡುದ್ರಂತೆ ಗಂಗಿಗೆ. ಆಮೇಲೆ ಅವ್ಳನ ಅವ್ರೇ ಇಟ್ಕೊಂಡ್ರು ಅಂತ ಕೇಳ್ದೆ ಕಣೆ."
"ಅದ್ಹೆಂಗ ಅದೀತೆ? ಅವ್ರು ಐನೋರು ಮತ್ತೆ ಇವ್ಳು..?"
"ಅದೇನೋ ಗೊತ್ತಿಲ್ಲೇ. ಎಂಥಾ ಹಾದ್ರ ಇಬ್ಬುರ್ದು ಅಂತೀನಿ. ಆ ಗೋವಿಂದಯ್ಯಂಗೆ ಯಾರು ಹೆಣ್ ಕೊಡೋರು ದಿಕ್ಕಿರ್ಲಿಲ್ಲ. ಗಂಗಿನ ಹೆದರ್ಸಿ ಬೆದರ್ಸಿ, ಸಾಲದ ಬಲೆಗೆ ಬೀಳ್ಸಿ ಅವಳ್ನ ಹಾಳ್ ಮಾಡಿದ್ನಂತೆ."
ಚೆನ್ನಿಗೆ ಆದ ಆಘಾತದಲ್ಲಿ ಅವಳಿಗೆ ತನ್ನ ಸಮಸ್ಯೆ ಕ್ಷಣಕಾಲ ಮರೆತೇ ಹೋಯಿತು. ತಾನು ಹೊರಡುತ್ತೇನೆಂದು ಹೇಳಿ ಹೊರಟಳು. ಗಂಗಿ ಚೆನ್ನಿಯ ಬಾಲ್ಯಸಖಿ. ಗಂಗಿಯ ಗಂಡ ಸತ್ತಾಗ ತಾನೇ ಹೋಗಿ ಸಾಂತ್ವನ ಹೇಳಿಬಂದಿದ್ದು ಅವಳಿಗೆ ನೆನಪಿತ್ತು. ಆದರ ನಂತರದ ಘಟನೆಗಳೊಂದೂ ಅವಳಿಗೆ ತಿಳಿದಿರಲಿಲ್ಲ. ಇದು ತನಗೆ ಒದಗಿರುವ ಕಷ್ಟಕ್ಕಿಂತಲೂ ದೊಡ್ಡ ಕಷ್ಟದಂತೆ ಅವಳಿಗೆ ತೋರಿತು. ಒಂದು ರೀತಿಯಲ್ಲಿ ತನ್ನ ಭವಿಷ್ಯವನ್ನೇ ಗಂಗಿಯ ರೂಪದಲ್ಲಿ ಕಂಡಂತಾಯಿತು. ಮಂಜನ ಮನೆ ಹಾಳಾಗಿ ಹೋಗ್ಲಿ, ಕ್ರೂರಿ ಕಾಳೇಗೌಡನೇ ತನ್ನ ಮೇಲೆ ಕಣ್ಣು ಹಾಕಿದರೆ ಎಂಬ ಭಯ ಹುಟ್ಟಿತು.
ಗೋಳಿಹಿತ್ತಲು ಐನೋರ ದೆಸೆಯಿಂದ ತನ್ನದೇ ಆದ ಪ್ರಖ್ಯಾತಿ ಮತ್ತು ಕುಖ್ಯಾತಿಯನ್ನು ಸುತ್ತಮುತ್ತಲಿನ ಊರುಗಳಿಗೆ ಪರಿಚಯ ಮಾಡಿಸಿತ್ತು. ಒಂದು ಒಕ್ಕಲುತನದ ಮನೆಯ ಆಳನ್ನು ಬೇರೆ ಒಕ್ಕಲುತನದ ಆಳಿಗೆ ಕೊಡುವುದು ತೀರ ವಿರಳವಾಗಿತ್ತು. ಆದರೂ ಐನೋರ ಮಧ್ಯಸ್ಥಿಕೆಯಿಂದ ಕಟ್ಟೆಮನೆಯ ಕಾಳೇಗೌಡರ ಮನೆಯ ಆಳಾದ ಗುಜ್ಜನ ಮಗಳು ಗಂಗಿಯನ್ನು ಗೋಳಿಹಿತ್ಲಿನ ಐನೋರ ಮನೆ ಆಳು ಸೀನನಿಗೆ ಕೊಟ್ಟು ಮದುವೆ ಮಾಡಲಾಗಿತ್ತು. ಅದು ದೊಡ್ಡ ಸುದ್ದಿಯಾಗಿ ಸುತ್ತ ಹತ್ತೂರಿಗೂ ಹರಡಿತ್ತು. ಅದಕ್ಕೆ ಕಾರಣ ಗೊಳಿಹಿತ್ತಲಿನ ದೊಡ್ಡ ಐನೋರಿಗೆ ಸೀನನ ಮೇಲಿದ್ದ ಅಪಾರ ಪ್ರೀತಿ. ದೊಡ್ಡ ಐನೋರು ತಮ್ಮ ಮನೆ ಆಳುಗಳನ್ನ ತಮ್ಮ ಮಕ್ಕಳಂತೆ ನೋಡುತ್ತಾರೆ ಎಂಬುವ ಪ್ರಖ್ಯಾತಿ ಎಲ್ಲರಿಗೂ ತಿಳಿದಿತ್ತು. ಆದರೆ ಅದು ಅವರ ಆಳು ಕೇಳಿದ ಹುಡುಗಿಯನ್ನೇ ಮಧ್ಯಸ್ಥಿಕೆ ಮಾಡಿ ಕರೆತರುವವರೆಗೂ ಹೋಗುತ್ತದೆಂದು ಯಾರೋ ಊಹಿಸಿರಲಿಲ್ಲ. ಗಂಗಿಯನ್ನು ಕಟ್ಟೆಮನೆ ಜೀತದಿಂದ ಬಿಡಿಸಿಕೊಳ್ಳಲು ಹಣವನ್ನೂ ಐನೋರೆ ಕೊಟ್ಟರೆಂದು ಜನ ಮಾತನಾಡಿಕ್ಕೊಂಡಿದ್ದನ್ನು ಚೆನ್ನಿ ಮರೆತಿರಲಿಲ್ಲ. ಅಲ್ಲದೆ, ಐನೋರು ತಮ್ಮ ಮನೆಯಲ್ಲಿ ಹೊಲೆಯ ಆಳುಗಳನ್ನು ಬಿಟ್ಟುಕೊಳ್ಳುತ್ತಿದ್ದರೆಂದೂ, ಅದರಿಂದಲೇ ದೊಡ್ಡ ಐನೋರಿಗೆ ಬರಬಾರದ ರೋಗ ಬಂದು ಸತ್ತು ಹೋದರೆಂದೂ ಜನ ಮಾತಾಡಿಕೊಂಡಿದ್ದನ್ನೂ ಚೆನ್ನಿ ನೆನಪಿಸಿಕೊಂಡಳು.
ತನ್ನ ಬಾಲ್ಯದ ಗೆಳತಿ ಬಹಳ ಕಷ್ಟದಲ್ಲಿರಬಹುದು ಎಂದು ಎನಿಸಲಾರಂಭಿಸಿತು ಚೆನ್ನಿಗೆ. ಯಾವುದಕ್ಕೂ ಒಂದು ಸಾರಿ ಮಾತನಾಡಿಸಿಕೊಂಡು ಬರೋಣವೆಂದೆನಿಸಿತು. ತನಗೂ ಅದೇ ಗತಿಯಾದರೆ ಕೆರೆಯೋ ಬಾವಿಯೊ ಗತಿಯಂದು ಯೋಚಿಸಿದಳು. ಗುಳೇಬೆಟ್ಟದಿಂದ ಔಷಧಿ ತರುತ್ತೇನೆಂದು ಹೇಳಿ ಗೊಳಿಹಿತ್ತಲಿನ ಕಡೆಗೆ ನಡೆದಳು. ನಾಲ್ಕಾರು ಗಂಟೆಗಳ ದಾರಿಯನ್ನು ಕಾಲ್ನಡಿಗೆಯಲ್ಲೇ ಕರ್ಮಿಸಬೇಕಿತ್ತು. ಬೆಳಗಿನ ಜಾವವೇ ಎದ್ದು ಹೊರಟಳು. ದುರ್ಗಮವೆನಿಸಿದರೊ ಇಕ್ಕೆಲಗಳಲ್ಲಿ ವಿಹಂಗಮ ನೋಟಗಳಿದ್ದ ದಾರಿಯಲ್ಲಿ ನಡೆಯುತ್ತ ಸಾಗಿದಳು ಚೆನ್ನಿ. ಕಾಲುದಾರಿಯಲ್ಲಿ ಬೆಳೆದಿದ್ದ ಹುಲ್ಲಿನ ಮೇಲಿನ ಬೆಳಗಿನ ಜಾವದ ಇಬ್ಬನಿ ಚೆನ್ನಿಯ ಬರಿಗಾಲುಗಳನ್ನು ತೇವ ಮಾಡಿತ್ತು. ಗುಳೇಬೆಟ್ಟದ ತಪ್ಪಲಿನತ್ತ ಹಾದು ಹೋಗಿವಾಗ ಮತ್ತದೇ ತೋಟ ಗದ್ದೆ ಕಣ್ಣಿಗೆ ರಾಚುವ ಹಸಿರು, ಎಷ್ಟೇ ಸುಂದರವಾಗಿದ್ದರೂ ನರಕದಂತೆ ಕಾಣುತಿತ್ತು. ಪ್ರತಿ ಹೆಜ್ಜೆಗೂ ಕಾನನ ದಟ್ಟವಾದಂತೆ ಅನ್ನಿಸುತ್ತಿತ್ತು. ಕೆಲವೆಡೆ ಮರಗಳ ದಟ್ಟನೆಯಿಂದ ಸೂರ್ಯನ ಕಿರಣಗಳು ನುಸುಳಿ ಬರದಷ್ಟು ಕತ್ತಲೆ. ಭಯ ಮತ್ತು ಕುತೂಹಲದಿಂದ ವೇಗವಾಗಿ ನಡೆದಳು ಚೆನ್ನಿ. ಅಲ್ಲಲ್ಲೇ ಕಂಡು ಮಾಯವಾಗುತ್ತಿದ್ದ ಸಣ್ಣ ಝರಿಗಲಿ ಇಳಿದು ದಣಿವಾರಿಸಿಕೊಂಡು ನಡೆದಳು. ನಿರ್ಜನವಾದ ಕಾಡಿನ ದಾರಿಯಲ್ಲಿ ಭಯವಾದಾಗಲೆಲ್ಲಾ ತನ್ನ ಕತ್ತಲಿನ ತಾಯ್ತವನ್ನೊಮ್ಮೆ ಮುಟ್ಟಿ ತನ್ನ ಇಷ್ಟ ದೇವತೆ ಊರಮ್ಮನ್ನು ನೆನೆದು ಮುಂದೆ ಸಾಗುತ್ತಿದ್ದಳು.
ಇತ್ತ ಗೊಳಿಹಿತ್ತಲಿನಲ್ಲಿನ ವಾತಾವರಣ ಕಟ್ಟೆಮನೆಗಿಂತಲು ಬಹಳ ಭಿನ್ನವಾಗಿತ್ತು. ಕಾಳೇಗೌಡರ ತೋಟಕ್ಕೆ ಸರಿಸಮವಲ್ಲದಿದ್ದರೂ ತಕ್ಕ ಮಟ್ಟಿಗೆ ವಿಶಾಲವಾದ ಗದ್ದೆ, ತೋಟವನ್ನು ಹೊಂದಿದ್ದರು ಹಿತ್ಲಿನ ಐನೋರ ಕುಟುಂಬ. ಅಲ್ಲಿನ ಬಡ ಕೂಲಿಗಳಿಗೆ ದೇವರ ಸಮಾನರಾಗಿದ್ದ ದೊಡ್ಡ ಐನೋರು ಗತಿಸಿ ವರ್ಷಗಳೇ ಕಳೆದಿದ್ದವು. ಆದರೂ ಗೊಳಿಹಿತ್ತಲಿನ ಗಾಳಿಯಲ್ಲಿ ಅದೆಂತುಹುದೋ ಒಂದು ಲವಲವಿಕೆ ಇತ್ತು. ಎಲ್ಲೆಡೆ ಸಮೃದ್ಧವಾಗಿ ಬೆಳೆದಿದ್ದ ಬೆಳೆಗಳು ಊರಿನ ಶ್ರೀಮಂತಿಕೆಗೆ ಹಿಡಿದ ಕೈಗನ್ನಡಿಯಾಗಿತ್ತು. ಹಿತ್ಲಿನ ಮಧ್ಯದಲ್ಲಿ ವಿಶಾಲವಾದ ತೋಪಿನ ನಡುವೆ ಐನೋರ ಮನೆ. ಐನೋರು ಗತಿಸಿ ವರ್ಷಗಳೇ ಕಳೆದರೂ ಅವರ ಇರುವಿಕೆಯನ್ನು ತೋರಿಸುವಂತ್ತಿತ್ತು ಆ ದೊಡ್ಡ ಮನೆ. ಅದಕ್ಕೆ ಕಾರಣ ಐನೋರ ಏಕಮಾತ್ರ ಸುಪುತ್ರ ಗೋವಿಂದಯ್ಯ. ತಂದೆಯ ಉದಾತ್ತ ಮನೋಭಾವವನ್ನು ಬಳುವಳಿಯಾಗಿ ಪಡೆದು ಬೆಳದಿದ್ದ ಗೋವಿಂದಯ್ಯ ಅಲ್ಲಿ ಒಕ್ಕಲಿದ್ದ ಜನರಿಗೆ "ಸಣ್ಣಯ್ನೋರು" ಎಂದೇ ಪ್ರಸಿದ್ಧವಾಗಿದ್ದ. ಬ್ರಾಹ್ಮಣರ ಮನೆಯಲ್ಲಿ ಹುಟ್ಟಿ ಬೆಳೆದರೂ, ಅವರ ತಂದೆ ಮತ್ತು ತಾಯಿಯರ ಶಿಕ್ಷಣದಿಂದ ಅಂದಿನ ಜಡ್ಡು ಹಿಡಿದ ಸಮಾಜದಿಂದ ತುಸು ವಿಮುಖನಾಗಿಯೇ ಇದ್ದನು. ಮೇಲು, ಕೀಳು, ಹೆಣ್ಣು, ಗಂಡು ಎಂಬ ಭೇದವನ್ನು ಬಿಟ್ಟು ತನ್ನಲ್ಲಿ ಕೆಲಸದಲ್ಲಿದ್ದ ಬಡ ಜನರಿಗೆ ಧಣಿಯಾಗಿ, ಸುತ್ತ ಊರಿನ ಜನರಿಗೆ ಆಪತ್ಬಾಂಧವನಾಗಿದ್ದನು. ದೊಡ್ಡ ಐನೋರು ಹರಿಪಾದ ಸೇರುವ ಮೊದಲು ಗೋವಿಂದ ಕೊಪ್ಪದ ಕಾನ್ವೆಂಟ್ ಶಾಲೆಯಲ್ಲಿ ಕಲೆಯುತ್ತಿದ್ದನು. ಆಗ ಅಲ್ಲಿಯೇ ಇದ್ದ ಗಣಪತಿ ಭಟ್ಟರ ಮನೆಯಲ್ಲಿ ಉಳಿದು ವ್ಯಾಸಂಗ ಮಾಡುತ್ತಿದ್ದನು. ಕಾನ್ವೆಂಟ್ ಶಾಲೆಗೆ ಕಳುಹಿಸಿದ ಜಾತಿಹೀನ ಎಂದು ದೊಡ್ಡ ಐನೋರನ್ನ ಬಾಯಿಗೆ ಬಂದಹಾಗೆ ಬೈದಿದ್ದ ಜನ ಅವರು ಜ್ವರದಿಂದ ಬಳಲಿ ಅಸುನೀಗಿದಾಗ ವಿಕೃತಿಯಿಂದ ಹೆಮ್ಮೆ ಪಟ್ಟು ಬೀಗಿದ್ದರು. ಆಗ ಯುವಕನಾಗಿದ್ದ ಗೋವಿಂದ ಓದು ಬರಹವನ್ನು ಅಲ್ಲಿಗೆ ನಿಲ್ಲಿಸಿ ಹಿತ್ಲಿಗೆ ಬಂದು ಮನೆ ಮತ್ತು ಜಮೀನಿನ ಉಸ್ತುವಾರಿಯನ್ನು ಬೇರೆ ದಾರಿಯಿಲ್ಲದೆ ವಹಿಸಿಕೊಂಡಿದ್ದನು. ಅನಂತರದ ದಿನಗಳಲ್ಲಿ ಅವನ ಕೊಪ್ಪದ ಕ್ರಿಶ್ಚಿಯನ್ ಸ್ನೇಹಿತರು ಹಿತ್ಲಿಗೆ ಬರುವುದರಿಂದ, ಇವನು ಹೊಲೆಯ ಆಳುಗಳನ್ನು ಮುಟ್ಟಿ ಮಾತಂದಾಡಿಸುವುದರಿಂದ ಜನರ ಬಾಯಿಗೆ ತುತ್ತಾಗಿದ್ದನು. ಗೋವಿಂದ ಮತಾಂತರ ಹೊಂದಿದ್ದಾನೆಂದೂ, ಕೊಪ್ಪದಲ್ಲಿ ಕ್ರಿಶ್ಚಿಯನ್ ಹುಡುಗಿಯೊಬ್ಬಳನ್ನು ಮದುವೆಯಾಗಿರುವುದಾಗಿಯೂ ಜನ ಮಾತನಾಡಲಾರಂಭಿಸಿದರು. ಅದ್ಯಾವುದರ ಪರಿವೆಯೂ ಇಲ್ಲದೆ ಗೋವಿಂದ ತಾನು ತನ್ನ ತೋಟ ಗದ್ದೆ ಎಂದು ಮುಳುಗಿದ್ದನು. ಮದುವೆಯ ವಯಸ್ಸಿಗೆ ಸರಿಯಾಗಿ ಅವನ ತಂದೆ ತಾಯಿಗಳ ನಿಧನವಾಗಿತ್ತು. ಆದ್ದರಿಂದ ಮದುವೆಯ ವಿಷಯದಲ್ಲಿ ಸಂಪೂರ್ಣ ನಿರಾಸಕ್ತಿಯಿಂದಿದ್ದನು. ಅವನ ಬಗೆಗೆ ಹರಡಿದ್ದ ಗಾಳಿಸುದ್ದಿಯ ದೆಸೆಯಿಂದ ಇವಿನಿಗೆ ಹೆಣ್ಣು ಕೊಡಲು ಯಾರೂ ಮುಂದೆ ಬರಲಿಲ್ಲ. ಈಗ ಪ್ರಾಯ ಮೂವತ್ತೈದಾದರೂ ಸ್ಫುರದ್ರೂಪಿಯಾಗಿ, ಪುಷ್ಟವಾಗಿ ಬೆಳೆದ, ಎತ್ತರದ ನಿಲುವಿನ ಆಳಾಗಿದ್ದನು. ತನ್ನ ತೋಟದಲ್ಲಿ ದುಡಿಯುತ್ತಿದ್ದ ಎಲ್ಲರ ಕಾಳಜಿ, ಕಟಾವು, ಗೊಬ್ಬರ, ಆಯವ್ಯಯ ಮೊದಲಾದವುಗಳಲ್ಲಿ ತಲ್ಲೀನನಾಗಿದ್ದನು. ಬಿಡುವಿನ ಸಮಯದಲ್ಲಿ ಒಂದು ಪುಸ್ತಕವನ್ನು ಹಿಡಿದುಕೊಂಡು ಹಿರೇಬೆಟ್ಟದ ತೋಪಿನಲ್ಲಿ ಕಾಲ ಕಳೆಯುತ್ತಿದ್ದನು. ಅವನ ಆ ಸಮಾಜಕ್ಕೆ ವಿಮುಖವಾದ ಪ್ರಕೃತಿಯನ್ನು ನೋಡಿ ಜನರು ಈ ಹುಚ್ಚು ಜಾತಿ ಕೆಟ್ಟದ್ದಕ್ಕೆ ಸಿಕ್ಕ ಶಿಕ್ಷೆ ಎಂದೇ ಮಾತನಾಡಿಕೊಂಡಿದ್ದರು. ಈಗಾಗಲೇ ಇರುವ ಗಾಳಿಸುದ್ದಿಗಳು ಸಾಲದೆಂಬಂತೆ, ಗೋವಿಂದನ ಕುರಿತು ಇತ್ತೀಚೆಗೆ ಹೊಸದೊಂದು ಸುದ್ದಿಯೊಂದು ಹರಡಿತ್ತು. ಅದೇನೆಂದರೆ ಗೋವಿಂದಯ್ಯ ತನ್ನ ಗದ್ದೆಯಲ್ಲಿ ಕೆಲಸ ಮಾಡುವ ಹೊಲೆಯ ಹೆಣ್ಣು ಗಂಗಿಯನ್ನ ಇಟ್ಟುಕೊಂಡಿದ್ದಾನೆಂದು. ಅವನ ಬಗ್ಗೆ ಹರಡಿರುವ ಸುದ್ಧಿಗಳಲ್ಲಿ ಇದೊಂದೇ ಸತ್ಯವಾದ ಸುದ್ದಿಯಾಗಿತ್ತು!!
ಸುಮಾರು ಒಂದೂವರೆ ವರ್ಷದ ಹಿಂದಿನ ಮಾತಿರಬಹುದು. ಒಂದು ದಿನ ಎಂದಿನಂತೆ ಗೋವಿಂದಯ್ಯ ಬೆಳಿಗ್ಗೆ ಬೇಗ ಎದ್ದು ತೋಟದ ಕೆಲಸಗಳನ್ನು ಆಳುಗಳಿಗೆ ವಹಿಸಲು ಹೊರಟನು. ರಾತ್ರಿಯೆಲ್ಲ ಮಳೆಯಾಗಿ ಭೂಮಿ ಮಿಂದು ತಂಪಾಗಿತ್ತು. ಬೆಳಗಿನ ಜಾವದ ಎಳೇ ಬಿಸಿಲು ತಣ್ಣಗೆ ಬೀಸುತ್ತಿದ್ದ ಗಾಳಿಯಲ್ಲಿ ಮುದ ನೀಡುತ್ತಿತ್ತು. ಹೊಲೇರ ಕೇರಿಯ ಮುಂದೆ ಬಳಸಿ ಮುಂದೆ ಸಾಗಿದನು ಗೋವಿಂದಯ್ಯ. ಜಮೀನ್ದಾರರು ಎದೆ ಸೆಟೆದುಕೊಂಡು ದರ್ಪದಿಂದ ನಡೆಯುತ್ತಿದ್ದ ಆ ಕಾಲದಲ್ಲಿ, "ಅಡ್ಡ ಬಿದ್ದೆ ಸಣ್ಣಯ್ಯನೂರಿಗೆ" ಎಂದು ಹೇಳಿದವರಿಗೆಲ್ಲ ಕೈ ಜೋಡಿಸಿ ನಮಸ್ಕರಿಸಿ ಯೋಗಕ್ಷೇಮ ವಿಚಾರಿಸದೆ ಹೋಗುತ್ತಿರಲಿಲ್ಲ ಅವರೆಲ್ಲರ ಪ್ರೀತಿಯ ಗೋವಿಂದಯ್ಯ. ಇದೆಲ್ಲವೂ ಪರ ಊರಿನವರು ವಿಚಿತ್ರವೆಂದನಿಸಿದರೂ, ಗೊಳಿಹಿತ್ತಲಿನ ಜನಕ್ಕೆ ಅಭ್ಯಾಸವಾಗಿತ್ತು. ತನಗಿಂತ ಹಿರಿಯ ಕೂಲಿಗಳಿಗೂ ಅವನು ಬಹುವಚನದಿಂದ ಮಾತನಾಡಿಸುತ್ತಿದ್ದನು. ಅವನ ಈ ಸ್ವಭಾವದಿಂದ ಜನರಿಗೆ ಅವನ ಮೇಲೆ ಪ್ರೀತಿ ಗೌರವ ದ್ವಿಗುಣವಾಗಿತ್ತು. ಗದ್ದೆಯನ್ನು ವೀಕ್ಷಿಸುತ್ತ ಭತ್ತದ ಕಟಾವಿನ ಸಮಯದ ಬಗ್ಗೆ ಯೋಚಿಸುತ್ತ ನಿಂತನು. ಅವನ ಒಕ್ಕಲಲ್ಲಿ ಕೆಲಸ ಮಾಡುವ ಅತ್ಯಂತ ಹಿರಿಯನಾದ ಮಲ್ಲ ಗೋವಿಂದಯ್ಯ ಬಂದಿದ್ದನ್ನು ಕಂಡು ಅವಸರದಲ್ಲಿ ಓಡೋಡಿ ಬಂದು ತಲೆಗೆ ಕಟ್ಟಿಕೊಂಡಿದ್ದ ರುಮಾಲನ್ನು ತೆಗೆದು ಗೌರವಪೂರ್ವಕವಾಗಿ ಸೊಂಟಕ್ಕೆ ಬಿಗಿದುಕೊಂಡು "ಅಡ್ಡ ಬಿದ್ದೆ ಧಣೀರಿಗೆ" ಎಂದು ಕೈ ಜೋಡಿಸಿದನು. ಅವನ ತಂದೆ ಸಮಾನರಂತೆ ಇದ್ದ ಮಲ್ಲನನ್ನು ಪ್ರೀತಿಯಿಂದ ಮಲ್ಲಣ್ಣ ಎಂದೇ ಸಂಬೋಧಿಸುತ್ತಿದ್ದನು ಗೋವಿಂದ.
"ಎನ್ ಮಲ್ಲಣ್ಣ ಬೆಳಿಗ್ಗೆ ಬೆಳಿಗ್ಗೆ ಬಂದ್ ಬಿಟ್ಟೀರಿ ತ್ವಾಟಕ್ಕೆ?"
"ವಸಿ ಕೆಲ್ಸ ಇತ್ರಾ. ಇನ್ನೇನು ಕಟಾವು ಮಾಡೋ ಕಾಲ ಬಂತಲರಾ ಅದಿಕ್ಕೆ.."
"ಮಲ್ಲಣ್ಣ ನಿಮಿಗೆ ವಯಸ್ಸಾಗ್ಯದೆ. ನೀವು ಮನೇಲಿ ಇರ್ಬೇಕು ಮೊಮ್ಮಕ್ಳ ಕೂಡ ಅಡ್ಕೊಂಡು. ನಿಮ್ ಮಗ ದುಡಿತಾನಲ್ರ, ಅವ್ನಿಗೆ ಏನಂತೆ ನಿಮ್ಮನ್ನ ಇನ್ನೂ ತ್ವಾಟಕ್ ಕಳಸಕ್ಕೆ. ಎಲ್ಲಿ ಬಚ್ಚ?"
"ಇಲ್ಲಿ ಬಂದೆ ನನ್ನೊಡೆಯ. ನಾ ಹೆಳಿದ್ರೂ ಕೇಳಾಕ್ಕಿಲ್ಲ ನೋಡ್ರಿ ಧಣಿ. ನೀವಾರ ವಸಿ ಹೇಳ್ರಿ ಬುದ್ಧಿಯ."
"ಸುಂಕಿರ್ಲಾ.. ನಿಂಗೇನ್ ಗೊತ್ತು? ಕಟಾವಿನ ಕಾಲ್ದಾಗೆ ಎಷ್ಟ ಕೈ ಇದ್ದರೂ ಸಾಲದು." ಎಂದು ಒಕ್ಕಲುತನದಲ್ಲಿ ತನ್ನ ನೈಪುಣ್ಯತೆಯನ್ನು ತೋರುತ್ತ ತನ್ನ ಮಗನ ಅಜ್ಞಾನವನ್ನು ತಿವಿದು ಮಾತನಾಡಿದನು.
"ಮಲ್ಲಣ್ಣ, ನಿಮ್ಗೆ ಹೇಳೋ ಶಕ್ತಿ ನನಗಿಲ್ಲ. ನೀವು ಮನೇಲಿ ಆರಾಮದಿಂದ ಇರ್ಬೇಕು ಅಂತ ನಾನ್ ಹೇಳೋದು. ಇದರ ಮೇಲೆ ನಿಮ್ಮ ಮನಸ್ಸು."
"ಈ ಕಟಾವೊಂದು ಆಗ್ಬಿಡ್ಲಿ ಧಣಿ. ನೀವ್ ಹೇಳದಂಗೆ ಮಾಡ್ತೀನಿ. ದ್ಯಾವರ ಸತ್ಯವಾಗ್ಲೂ." ಎಂದು ಮುದುಕ ಮುಗ್ಧ ನಗೆ ಬೀರಿದ.
ಮನುಷ್ಯನ ಒಳಗಿನ ಸೌಂದರ್ಯವನ್ನು, ಮುಗ್ಧತೆಯನ್ನು ನೋಡಲು ಹೇಳಿಕೊಟ್ಟಿದ್ದರು ಅವನ ತಂದೆ. ಅದರಿಂದಲೇ ಗೋವಿಂದಯ್ಯನಿಗೆ ಜಾತಿ, ಲಿಂಗ, ಮೇಲು, ಕೀಳು ಎಂಬೆಲ್ಲ ಪರದೆಗಳನ್ನು ಬದಿಗೆ ಸರಿಸಿ, ಮನುಷ್ಯನ ದೈವೀ ಸ್ವಭಾವವನ್ನು ನೋಡಲು ಸಾಧ್ಯವಾಗುತ್ತಿತ್ತು. ಎಲ್ಲೆಡೆ ಕೆಲಸಗಳ್ಳತನ, ಮೋಸ ಹೇರಳವಾಗಿದ್ದರೂ, ಗೋವಿಂದನ ಕಾಳಜಿ, ಋಣದ ಭಾರವನ್ನು ಹೊತ್ತ ಗೊಳಿಹಿತ್ತಲಿನ ಕೂಲಿಗಳು ಬೇಡವೆಂದರೂ ಬಂದು ಕೆಲಸದಲ್ಲಿ ತೊಡಗುತ್ತಿದ್ದರು. ಹಿಂದಿನ ದಿನ ಸುರಿದ ಮಳೆಗೆ ಕೇಸರಾಗಿದ್ದ ದಿಬ್ಬವನ್ನು ಗಮನಿಸದೆ ಮೆಟ್ಟಲು ಹೋಗಿ ರಪ್ ಎಂದು ಬಿದ್ದನು ಗೋವಿಂದ. ಮಯ್ಯಲ್ಲಾ ಕೇಸರಾಯ್ತು. ಕಾಲು ಉಳುಕಿತ್ತು. ಒಂದು ಕೈಯನ್ನು ಬಚ್ಚ, ಇನ್ನೊಂದ್ಜು ಕೈಯನ್ನು ಮಲ್ಲಣ್ಣ ಹಿಡಿದು ಎತ್ತಿದರು.
"ಎಂಥಾ ಕೆಲ್ಸ ಆಯಿತು, ಧಣಿ, ಬೆಳಬೆಳಿಗೆ." ಮಲ್ಲಣ್ಣ ನುಡಿದ.
"ಕಾಲು ಉಳುಕ್ತು ಮಲ್ಲಣ್ಣ ಕೇಸರಲ್ಲಿ."
"ನೋವ್ತ ಅದನಾ ಬುದ್ಧಿ?" ಬಚ್ಚ ಕೇಳಿದ.
"ಹ್ಞೂ ಕಣ್ ಬಚ್ಚ..ಬಲಗಾಲು"
ಇಬ್ಬರೂ ಸೇರಿ ಗೋವಿಂದನನ್ನು ಒಂದು ಬಂಡೆಯ ಮೇಲೆ ತಂದು ಕೂರಿಸಿದರು. ಮಲ್ಲಣ್ಣ ಪರಿಸ್ಥಿತಿಯನ್ನು ನಿಭಾಯಿಸುವಂತೆ ಅಧಿಕಾರವಾಣಿಯಿಂದ ಹೇಳಿದನು.
"ಬಚ್ಚ, ನೀನು ಐನೋರನ್ನ ಮನಿಗೆ ಕರ್ಕೊಂಡ್ ಹೋಗು ಮಗಾ. ಧಣಿ ನೀವೇನು ಯೋಚ್ನೆ ಮಾಡ್ಬ್ಯಾಡ್ರಿ, ನಾನು ಇಲ್ಲೆಲ್ಲಾ ನೋಡ್ಕೋತೀನಿ. ನೀವು ಮನಿಗೆ ಹೋಗಿ ಕಾಲಿಗೆ ವಸಿ ಬಿಸ್ನೀರು ಕೊಬ್ಬರಿ ಎಣ್ಣೆನ ಹಾಕಳಿ. ಹೊತ್ತಾರೆ ಎಲ್ಲ ಸರಿ ಹೋತದೇ. ನಾನು ಯಾರನಾರ ಪಂಡಿತ್ರ್ ಹತ್ರ ಕಳುಸ್ತೀನಿ ಔಸ್ಡಿ ತಗಂ ಬರಾಕೆ."
ಬಚ್ಚ ಅವರಪ್ಪನ ಆಜ್ಞೆಯಂತೆ ಗಿವಿಂದನ ಕೈಯನ್ನು ಹೆಗಲ ಮೇಲೆ ಹಾಕಿ ನಾಡಿಸಿಕೊಂಡು ಅವರ ಮನೆಯ ಕಡೆಗೆ ಹೊರಟ. ಮನೆಗೆ ಬಂದು ಹುಸ್ಸೆಂದು ಕುಳಿತ ಗೋವಿಂದ.
"ಈ ಕಾಲಿಟ್ಗಂಡು ಹೆಂಗ್ರಾ ಅಡಿಗೆ ಊಟ ಎಲ್ಲ ಮಾಡ್ತೀರಾ ಧಣಿ?" ಕೇಳಿದ ಬಚ್ಚ. ಬಚ್ಚನು ವಾರಿಗೆಯವನಾದ್ದರಿಂದ ಗೋವಿಂದನ ಜೊತೆ ಸಲಿಗೆಯಿಂದಿದ್ದನು.
"ಯಾಕಪ್ಪ ಬಚ್ಚ, ನಂಗೆ ಒಂಧೋತ್ತು ಕೂಳು ಮಾಡಿ ಕಳಸಕ್ಕೆ ಆಗಲ್ಲೇನು ನಿಂಗೆ?" ಅಧಿಕಾರ ಪ್ರಜ್ಞೆ ಯಿಂದ ಕೇಳಿದನು ಗೋವಿಂದ.
"ಬಿಡ್ತು ಅನ್ರಿ ಧಣಿ. ನಮ್ ಊಟ ಯಾಕ್ ಮಾಡ್ತೀರಿ ನೀವು."
"ಏನಾಯಿತು ಮಾರಾಯ? ಮತ್ ನನ್ನೇನ್ ಮಾಡು ಅಂತಿಯ? ನಂಗ್ಯಾರ ಹೆಂಡಿರ ಮಕ್ಳ ಮಾಡಿ ಹಾಕಕೆ?"
"ಅಲ್ಲ ಧಣಿ, ಅದೂ ಅದೂ"
"ಅವೆಲ್ಲ ಏನಿಲ್ಲ. ನಿಮ್ ಮನ್ಯಾಗ ಎನ್ ಮಾಡಿರ್ತಾರೋ ವಸಿ ನಂಗೂ ಕಳ್ಸ"
ಬಚ್ಚನ ಕಣ್ಣಲ್ಲಿ ಹರುಷ ತುಂಬಿತ್ತು. ಅನಂದಭಾಷ್ಪ ಬುರುವುದೊಂದೆ ಉಳಿದಿತ್ತು.
"ಬಡವರ ಮನಿಗೆ ಭಾಗ್ಯ ಬಂದಂಗಾಯ್ತು ಧಣಿ. ನೀವ್ ಹೇಳದಂಗೆ ಆಗ್ಲಿ. ನಾನಿನ್ನ ಬರ್ತೀನಿ"
"ಬಚ್ಚ ಅಲ್ಲಿರೋ ಪುಸ್ತಕ ಕೊಟ್ಟು ಹೊಗ್ಲಾ. ಇನ್ನೇನು ಬೇರೆ ಕೆಲ್ಸ ಇಲ್ಲ ನಂಗೆ ಈಗ."
ಕಾಲನ್ನು ಮಿಸುಕಾಡದೆ ಓದುತ್ತ ಕುಳಿತ ಗೋವಿಂದ. ಪುಸ್ತಕವೊಂದಿದ್ದರೆ ಯಲ್ಲವನ್ನೂ ಮರೆತು ಹಸಿವೆ ನಿದ್ರೆಯ ಪರಿವೆಯೇ ಇಲ್ಲದೆ ಕುಳಿತುಬಿಡುತ್ತಿದ್ದ. ತಮ್ಮ ಧಣಿ ಕಾಲು ಗಾಯ ಮಾಡಿಕೊಂಡು ಮನೆಯಲ್ಲಿ ಕುಳಿತಿದ್ದಾರೆಂದರೆ ಸುಮ್ಮನೆ ಬಿಟ್ಟು ನಂಬಿಡುತ್ತಾರೆಯೇ ಅವರ ಒಕ್ಕಲಿನ ಜನ? ಒಬ್ಬಬ್ಬರಂತೆ ಅವನ ಯೋಗಕ್ಷೇಮ ವಿಚಾರಿಸಲು ಬರಲು ಶುರು ಮಾಡಿದರು. ಅವನ ಒಕ್ಕಲಿನ ಆಳು ಹಾಗಿರಲಿ ಆಳಿನ ಮಕ್ಕಳಿಗೂ ಚಿಕ್ಕ ಪುಟ್ಟ ಖಾಯಿಲೆ ಕಸಾಲೆಯಾದರೂ ಗೋವಿಂದ ಅವರ ಮನೆಗೆ ಹೋಗಿ ಯೋಗಕ್ಷೇಮ ವಿಚಾರಿಸಿ ಔಷದೋಪಚಾರಕ್ಕೆಂದು ಕಾಸು ಕೊಟ್ಟು ಬರುತ್ತಿದ್ದ. ತನಗೆ ಏನೊ ಆಗಿಲ್ಲವೆಂದು, ಎರಡು ದಿನ ವಿಶ್ರಾಂತಿ ಪಡೆದರೆ ಸರಿ ಹೋಗುವದೆಂದೂ ಹೇಳಿ ಜನರನ್ನು ಸಾಗಿ ಹಾಕಿ ಓದುವುದರಲ್ಲಿ ಮಗ್ನನಾಗಿ ಕುಳಿತನು. ಅಷ್ಟರಲ್ಲಿ ಮಧ್ಯಾಹ್ನವಾಯಿತು.
ಇತ್ತ ಕೇರಿಯಲ್ಲಿ ಬಚ್ಚನು ತನ್ನ ಹೆಂಡತಿಗೆ ಹೇಳಿ ಅಡುಗೆ ಮಾಡಿಸಿದ್ದ. ಮಲ್ಲಣ್ಣ ಬಚ್ಚನ ತಮ್ಮನ ಹತ್ತಿರ ಔಷಧಿಯನ್ನು ತರಿಸಿದ್ದ. ಮಲ್ಲಣ್ಣ ಐನೋರ ಮನೆಯ ಹತ್ತಿರದಲ್ಲೇ ಇದ್ದ ಗಂಗಿಯ ಮನೆಗೆ ಹೋಗಿ ಊಟ ಮತ್ತು ಪಂಡಿತರ ಎಣ್ಣೆಯನ್ನು ಐನೋರ ಮನೆಗೆ ಕೊಟ್ಟುಬರಲು ಹೇಳಿದ. ಗಂಗಿಗೆ ಐನೋರಿಗೆ ಈ ರೀತಿಯಾಗಿದ್ದು ದುಃಖ ತಂದುಕೊಟ್ಟರೆ, ಅವರಿಗೆ ಸೇವೆ ಮಾಡಿ ಅವರ ಋಣವನ್ನು ಸ್ವಲ್ಪವಾದರೂ ತೀರಿಸುವ ಅವಕಾಶ ಸಿಕ್ಕಿತೆಂದು ಒಳಗೆ ಹಿಗ್ಗಿದ್ದಳು. ಊಟ ಮತ್ತು ಔಷಧಿ ಎಣ್ಣೆಯನ್ನು ತೆಗೆದುಕೊಂಡು ಐನೋರ ಮನೆಯ ಕಡೆ ಹೊರಟಳು. ಗೋವಿಂದ ಅವಳ ಗಂಡ ತೀರಿಹೋದಾಗ ಮಾಡಿದ್ದ ಸಹಾಯ ಅಷ್ಟಿಷ್ಟಲ್ಲ. ದೂಡ್ಡೈನೋರು ಖಾಯಿಲೆಯಿಂದ ಬಳಲುತ್ತಿದ್ದಾಗ ಅವರನ್ನು ಬಹಳ ಕಾಲಜಿಯೊಂದಿಗೆ ನೋಡಿಕೊಂಡಿದ್ದ. ಗೋಪಾಲಯ್ಯನವರು ಕೊನೆ ಕ್ಷಣದಲ್ಲಿ ನೋಡಬಯಸಿದ್ದು ಅವಳ ಗಂಡ ಸೀನನನ್ನೇ. ಅವರು ಸಾಯುವ ವೇಳೆಗಾಗಲೇ ಸೀನನೂ ಅದೇ ಖಾಯ್ಲಿಗೆ ಸಿಕ್ಕಿ ನಲುಗಿ ಹೋಗಿದ್ದ. ಗೋಪಾಲಯ್ಯನವರ ವ್ಯಕುಂಠದ ದಿನ ಸೀನನೂ ಅವನ ಪ್ರೀತಿಯ ಐನೋರನ್ನು ಹಿಂಬಾಳಲಿಸಿಯೇ ಬಿಟ್ಟಿದ್ದ! ಮದುವೆಯಾಗಿ ಮೂರ್ನಾಲ್ಕು ತುಂಗಳುಗಳಷ್ಟೇ ಕಳೆದಿದ್ದವು. ಗಂಗಿ ವಿಧವೆಯಾಗಿಬಿಟ್ಟಿದ್ದಳು. ಆದರೆ ಗೋವಿಂದ ಸೀನನ್ನು ಉಳಿಸಿಕೊಳ್ಳಲು ಕೊಪ್ಪದ ಆಸ್ಪತ್ರೆಯ ವೈದ್ಯರನ್ನೂ ಕರೆಸಿದ್ದ, ತನ್ನ ಕೈಯಲ್ಲಿ ಮಾಡಬಹುದಾದದ್ದಾನೆಲ್ಲ ಮಾಡಿದ. ಆದರೂ ಸೀನನ ಪ್ರಾಣಪಕ್ಷಿ ಹಾರಿಹೋಗಿತ್ತು. ಅದಾಮೇಲೂ ಗೋವಿಂದ ವಿಧವೆಗೆ ಹಣ ಕೊಟ್ಟು ತನ್ನ ಮನೆ ತೋಟದಲ್ಲಿಯೇ ಕಯ್ಯಲಾದಷ್ಟು ಮಾತ್ರ ಕೆಲಸ ಮಾಡು ಎಂದು ಹೇಳಿ ಅವಳ ಜೀವನವನ್ನು ಹಗುರ ಮಾಡುವ ಪ್ರಯತ್ನ ಮಾಡಿದ್ದ. ತನ್ನ ಸ್ವಾಮಿನಿಷ್ಠೆಯಿಂದ ತಾನಿಲ್ಲದಿದ್ದರೂ ತನ್ನ ಹೆಂಡತಿಗೆ ಯಾವುದೇ ಕಷ್ಟವಿಲ್ಲದ ಜೀವನೋಪಾಯವನ್ನು ಮಾಡಿ ಹೋಗಿದ್ದ ಸೀನ. ಗೋವಿಂದ ಮತ್ತು ಗಂಗಿಯ ನಡುವೆ ಯವ್ವನಸಹಜವಾದ ಆಕರ್ಷಣೆ ಅವರಿಬ್ಬರ ಮನಸ್ಸಿಸನ ಆಳದಲ್ಲೆಲ್ಲೋ ಯಾವುದೋ ಒಂದು ಕ್ಷಣದಲ್ಲಿ ಇದ್ದಿರಬಹುದು. ಆದರೆ ಅದು ಬೆಳೆಯದೆ ಸತ್ತು ಹೋಗಲು ಅವರಿಬ್ಬರ ಅಂತಸ್ತಿನ ವ್ಯತ್ಯಾಸವೇ ಸಾಕಾಗಿತ್ತು. ಗೋವಿಂದನ ಮುಖದಲ್ಲಿ ಹೊಳೆಯುವ ಕಳೆ, ಅವನ ರಾಜಗಾಂಭೀರ್ಯದ ನಡೆ, ಅವನ ಸದಾ ಹಸನ್ಮುಖಿ ತುಟಿಗಳು, ಅವನ ನಡಾವಳಿ ಇವನ್ನು ನೋಡಿ ಮಾರು ಹೋಗದ ಹೆಣ್ಣುಗಳು ತೀರ ವಿರಳ.
ಕೆತ್ತನೆಗಳಿಂದ ಕಂಗೊಳಿಸುತ್ತಿದ್ದ ಬಾಗಿಲು ತೆರೆದೇ ಇತ್ತು. ನೆಲದಿಂದ ಮೂರ್ನಾಲ್ಕು ಮೆಟ್ಟಿಲಗಳಷ್ಟು ಎತ್ತರದಲ್ಲಿದ್ದ ಜಗುಲಿಯ ಕಪ್ಪನೆಯ ಹಾಸುಗಲ್ಲಿನ ಹಿಂದೆ ದೊಡ್ಡ ಹೊಸ್ತಿಲು. ತಲಬಾಗಿಲಿನಿಂದಲೇ ನಡುಮನೆಯ ದೊಡ್ಡ ಪ್ರಾಕಾರ ಕಾಣುತ್ತಿತ್ತು. ತೇಗದ ದೊಡ್ಡ ಕಂಬಗಳು, ಅಡ್ಡಲಾಗಿದ್ದ ತೊಲೆಗಳು ಮನೆಯ ಭವ್ಯತೆಯನ್ನು ಇಮ್ಮಡಿಗೊಳಿಸಿದ್ದವು. ಗೋವಿಂದಯ್ಯ ಪುಸ್ತಕ ಓದಿಕೊಂಡು ಕೂತಿದ್ದ.
"ಧಣಿ, ನಿಮಿಗೆ ಊಟ ಔಸ್ಡಿ ತಂದಿವ್ನಿ. ನಿಮ್ ಕಾಲ್ ಹೆಂಗದೆ ಈಗ?" ಎಂದು ಬಾಗಿಲ ಹೊರಗೆಯೇ ನಿಂತು ನುಡಿದಳು. ಅವಸರದಲ್ಲಿ ತನ್ನ ಸೆರಗನ್ನು ಮೈತುಂಬ ಹೊದ್ದಳು.
"ಓಹ್, ಗಂಗಿ. ಬಾ ಒಳಕ್ಕೆ. ಬಚ್ಚ ನಿನ್ ಕಳ್ಸಿದ್ನ?"
ಗಂಗಿ ಸಂಕೋಚದಿಂದ ಒಳಗೆ ಬಂದಳು. ಆಮ್ಮ್ನೋರು ಇದ್ದಾಗ ಒಂದೆರೆಡು ಬಾರಿ ಬಂದಿನದ್ದಳು ಆ ಮನೆಗೆ. ಆಮೇಲೆ ಬರುವ ಪ್ರಸಂಗ ಒದಗಿರಲಿಲ್ಲ. ತುಂಬು ಕುಟುಂಬವಿರುತ್ತಿದ್ದ ಮನೆ ಬಿಕೋ ಎನ್ನುವುದ ಕಂಡು ಬೇಸರ ಪಟ್ಟಳು.
"ಹೂ ಧಣಿ, ಬಚ್ಚಣ್ಣ ಗದ್ದೆಗೋದ. ತಕ್ಕಳಿ ಔಸ್ಡಿ ಊಟ ತಂದಿವ್ನಿ. ಇದನ್ನ ಕಾಲಿಗೆ ಹಚ್ಕ ಬೇಕಂತೆ. ಪಂಡಿತರು ಹೇಳೌರೆ." ಗೋವಿಂದನ ಕೈಗೆ ಕೊಡಲು ಹಿಂಜರಿದಳು.
"ಇರ್ಲಿ ಕೊಡು ನನ್ನ ಕೈಯಲ್ಲಿ." ಗೋವಿಂದ ಎಣ್ಣೆಯನ್ನು ಹಚ್ಚಿಕೊಳ್ಳಲು ಪ್ರಯತ್ನಿಸಿದ ಆದರೆ ಆಗಲಿಲ್ಲ.
"ಗಂಗಿ, ನೀನ್ಹೋಗಿ ಬಚ್ಚ ಇಲ್ಲ ಬ್ಯಾರೆ ಯಾರ್ನಾದ್ರು ಕಳುಸ್ತೀಯಾ? ನಂಗೆ ಕಾಲ್ ನಿಲಕಲ್ಲ."
ಗಂಗೀಗೆ ಮನಸ್ಸಲ್ಲಿ ಏನೋ ತುಮುಲ. ಅವಳ ಮನಸ್ಸಿನ ಆಳದಲ್ಲಿ ಹುದುಗಿ ಹೋಗಿದ್ದ ಸಣ್ಣ ಆಸೆಯ ಚಿಲುಮೆ ಒಡೆಯಿತೇನೋ ಎಂಬಂತೆ. ಆದರೆ ಮಾತನಾಡಲು ಭಯ. ತನಗೇ ಯಾಕೆ ಎಣ್ಣೆ ತಿಕ್ಕಲು ಹೇಳುತ್ತಿಲ್ಲ ಎಂದು ಮೌನವಾಗಿ ಕೊರಗಿದಳು. ತನ್ನನ್ನು ಮೊದಲಿನಿಂದಲೂ ಕಾಳಜಿ ವಹಿಸಿ ನೋಡಿಕೊಂಡ ಅವಳ ಧಣಿಯ ಮೇಲೆ ಸ್ರೀಸಹಜವಾದ ಮಮತೆ ಅವಳಲ್ಲಿ ಮೂಡಿತ್ತು. ಅದರಲ್ಲಿ ಅವಳ ವಯೋಸಹಜವಾದ ನೈಸರ್ಗಿಕವಾದ ದೈಹಿಕ ಕಾಮನೆಗಳು ಬೆರೆತಿರಲೂಬಹುದು.
"ಹೂ.." ಎಂದು ಇನ್ನೇನು ಹೊರಡಲು ಹಿಂದೆ ತಿರುಗಬೇಕೆಂಬಲ್ಲಿಗೆ ಗೋವಿಂದನಿಗೆ ಅದೇನಾಯಿತೋ, "ಗಂಗಿ, ನಿಂಗೇನೂ ಅಭ್ಯಂತ್ರಾ ಇಲ್ದಿದ್ರೆ ನೀನೇ ವಸಿ ಕಾಲಿಗೆ ಎಣ್ಣೆ ಉಜ್ಜತಿಯಾ? ನಂಗೆ ನೋವು ಭಾಳ ಆಗ್ತಾ ಅದೇ. ಇಲ್ದಿದ್ರೆ ಬಚ್ಚ ಬರೋವರಿಗೂ ಕಾಯ್ಬೇಕು." ಎಂದುಬಿಟ್ಟನು.
ಅಂದಿದ್ದೇನೋ ಅಂದುಬಿಟ್ಟನು. ತಾನು ಹೇಳಿದ್ದನ್ನು ಗಂಗಿ ಅಪಾರ್ಥ ಮಾಡಿಕೊಂಡುಬಿಡುತ್ತಾಳೆ ಎಂಬ ಭಯ ಶುರುವಾಯ್ತು.
"ಅಲ್ಲ, ನೋವಿನ ಹೊಡತಕ್ಕ ಹಂಗ ಹೇಳ್ದೆ. ಪರವಾಗಿಲ್ಲ ಬಚ್ಚನ್ನೇ ಕಳಸು ಕಾಯ್ತಿನಿ. ನಿಂಗ್ಯಾಕೆ ಸುಮ್ನೆ ತೊಂದ್ರೆ"
"ಅಯ್ಯೋ ಧಣಿ. ತೊಂದ್ರೆ ಅಂತೀರಲ್ಲ. ನಂಗೇನು ಪರವಾಗಿಲ್ಲ. ನಾನೇ ಎಣ್ಣೆ ತಿಕ್ತಿನಿ. ಯಾಕ್ ಸುಮ್ಕೆ ನೋವಿನಲ್ಲಿ ಇರ್ತೀರ. ನಿಮ್ಗೆ ನನ್ನ ಮುಟ್ಸಕೊಳಕೆ ಇಷ್ಟ ಇಲ್ಲ ಅಂದ್ರೆ ಹೇಳ್ರಿ, ನಾನು ಬಚ್ಚಣ್ಣನ ಕರಕಂಡು ಬರ್ತೀನಿ"
ಅವಳ ಮುಗ್ಧ ಅಸಹಾಯಕತೆಯಿಂದ ಕೂಡಿದ್ದ ಮುನಿಸು ಅವಳ ಮುಖದಲ್ಲಿ ತೋರದೆ ಇರಲಿಲ್ಲ.
"ಅದ್ಯಾಕ ಹಂಗ ಮುನಿಸಕೋತಿಯ ಗಂಗಿ? ನಿಂಗೊತ್ತಿಲ್ವಾ ನಂಗೆ ಅದ್ರಲ್ಲೆಲ್ಲ ನಂಬಿಕೆ ಇಲ್ಲ ಅಂತ? ಹಂಗಿದ್ರೆ ನಾ ಬಚ್ಚನ್ನ ಕಳಸು ಅಂತ ಯಾಕ್ಹೇಳಿತಿದ್ದೆ ಹೇಳು?"
"ಹಂಗಾರ್ ಇಲ್ಕೊಡಿ ಧಣಿ. ನಾನೇ ತಿಕ್ತಿನಿ" ಎಂದು ಎಣ್ಣೆಯ ಡಬ್ಬಿಯನ್ನ ಕಸಿದುಕೊಂಡಳು. ಗೋವಿಂದ ಕೂತಿದ್ದ ಕುರ್ಚಿಯ ಹತ್ತಿರ ಕೆಳಗೆ ಕುಳಿತುಕೊಂಡಳು. ತನ್ನ ಒಡೆಯನ ಸೇವೆ ಮಾಡಿ ಅವರ ನೋವನ್ನು ಕೊಂಚವಾದರೂ ಕಡಿಮೆ ಮಾಡಿದರೆ ಅಷ್ಟೇ ಸಾಕು ಎಂದುಕೊಂಡಳು. ಮೊದಲು ಸ್ವಲ್ಪ ಸಂಕೋಚವೆನಿಸಿತು. ಗೋವಿಂದನ ಕಾಲುಗಳನ್ನು ಸ್ಪರ್ಶ ಮಾಡಿದಳು. ಅವಳ ಮೈಯಲ್ಲೊಂದು ರೀತಿಯ ರೋಮಾಂಚನವಾಯಿತು.
"ಎಲ್ಲ್ ಉಳುಕೈತೆ ಧಣಿ?" ಎಂದು ಕಾಲನ್ನು ನೇವರಿಸಿದಳು. ಅವಳ ಕೈ ಹಿಂಬಡದ ಮೇಲ್ಭಾಗಕ್ಕೆ ಬಂದಾಗ ನೋವಿನಿಂದ ತುಸು ಜೋರಾಗೆ ಕಿರಿಚಿದನು.
"ಆಯ್ಯ್ ಧಣಿ ಗೊತ್ತಾಗಲಿಲ್ಲ."
"ಇರ್ಲಿ ಇರ್ಲಿ. ಅಲ್ಲೇ ಉಳುಕು ಆಗಿರದು. ಸ್ವಲ್ಪ ಮೆತ್ತಗೆ ತಿಕ್ಕು"
ಕೈಯಲ್ಲಿ ಎಣ್ಣೆಯನ್ನು ತೆಗೆದು ಪೆಟ್ಟು ಬಿದ್ದ ಜಾಗಕ್ಕೆ ಸೂಕ್ಷ್ಮ ಸ್ಪರ್ಶದಿಂದ ಹಚ್ಚಿದಳು.
"ನಿಮ್ ಕಾಲನ್ನ ಇಲ್ಲಿಡಿ ಧಣಿ. ಅಳ್ಳಾಡಕ್ಕಿಲ್ಲ" ಎಂದು ತನ್ನ ತೊಡೆಯ ಹತ್ರಿರ ಅವನ ಕಾಲನ್ನು ಮೆಲ್ಲಗೆ ಎಳೆದು ಇರಿಸಿಕೊಂಡಲು. ಈಗ ರೋಮಾಂಚನದ ಸರದಿ ಗೋವಿಂದನದಾಗಿತ್ತು. ಅವಳ ಮೆತ್ತನೆಯ ಹೂವಿನಂಥ ತೊಡೆಯ ಮೇಲೆ ಅವನ ಪಾದ ಸ್ಪರ್ಶವಾಗಿದ್ದೆ ತಡ ನೋವಿನ ಹೊಡೆತವನ್ನೇ ಮರೆತುಬಿಟ್ಟನು ಗೋವಿಂದ. ಹೆಣ್ಣಿನ ಸ್ಪರ್ಶವನ್ನೇ ಅರಿಯದೇ ಕಲ್ಲಿನಂತಿದ್ದ ಅವನ ಸ್ಪರ್ಶಇಂದ್ರಿಯಗಲ್ಲಿ ಹೊಸ ಚೇತನ ಬಂದಂತಾಯಿತು. ಮೆಲ್ಲಗೆ ಕಾಲಿನ ಭಾರವನೆಲ್ಲ ಅವಳ ತೊಡೆಗೆ ಅರ್ಪಿಸಿದ. ಅವಳ ಕೈಯ ಮೃದು ಸ್ಪರ್ಶವನ್ನು ಅನುಭವಿಸುವುದೋ, ಅವಳ ತೊಡೆಯ ಆಶ್ರಯವನ್ನು ಸವಿಯಿವಿದೋ ಗೊತ್ತಾಗದೆ "ಹಾ…" ಎಂದು ನಿಟ್ಟುಸಿರು ಬಿಟ್ಟ. ಇದ್ಯಾವುದೂ ಗೊತ್ತಿಲ್ಲದೆ ತನ್ನ ಒಡೆಯನ ಕಾಲಿನ ನೋವನ್ನು ಮಾತ್ರ ತಾನು ಪರಿಹರಿಸುತ್ತಿರುವೆನೆಂದು ಭಾವಿಸಿ ಅವನ ಪಾದ ಸೇವೆಯಲ್ಲಿ ತತ್ಪರಳಾದಳು ಗಂಗಿ.
ಪರಿಸ್ಥಿತಿಯನ್ನು ತಿಳಿಗೊಳಿಸುವ ದೃಷ್ಟಿಯಿಂದ ಕೇಳಿದನು:
"ಗಂಗಿ, ಬಚನ್ನ ಕರ್ಕೊಂಡು ಬಾ ಅಂದೆ ಅಂತ ಮತ್ತೆ ಬೇಜರಾಯ್ತಾ?"
ಎಣ್ಣೆ ಸವರುತ್ತಲೇ ಗಂಗಿ ನುಡಿದಳು. "ಇಲ್ಲ ನನ್ನ ಧಣಿ, ಈ ಪಾಟಿ ನೋವಿಟ್ಕಂಡು ನಂಗೆ ಹೇಳ್ಬೈದಿತ್ತಲ್ಲ ನಿಮ್ ಕಾಲ ಉಜ್ಜಕ್ಕೆ? ನಾನೇನ್ ನಿಮಗೆ ದೂರದೊಳ? ನಿಮ್ ಋಣ ಐತೆ ನನ್ ಮ್ಯಾಕೆ. ಇಷ್ಟಾದ್ರೂ ತೀರಸಾಕ್ ಬಿಡಿ ಧಣಿ"
ಅವಳ ಧ್ವನಿ ಗದ್ಗದಿತವಾಗಿತ್ತು. ಅದರಲ್ಲಿ ಅವಳು ಅನುಭವಿಸಿದ ಸಾವಿರಾರು ನೋವುಗಳು ಅಡಗಿದ್ದವು.
"ಹೋಗ್ಲಿ ಬಿಡು ಗಂಗಿ. ತಪ್ಪಾತು ಬಿಡು"
"ಅಯ್ಯೋ ಬಿಡ್ತು ಅನ್ನಿ ನನ್ನೊಡೆಯ. ನಮಗೆಲ್ಲ ಅನ್ನ ನೀರು ಕೊಟ್ಟ ಧಣಿ ನೀವು. ಹೀಗೆಲ್ಲಾ ತಪ್ಪಾತು ಅಂತೆಲ್ಲ ಅನ್ನ್ ಬ್ಯಾಡ್ರಿ" ಎಂದು ದೈನ್ಯದಿಂದ ಗೋವಿಂದನ ಕಡೆಗೆ ನಾಚಿಕೆಯ ದೃಷ್ಟಿಯಿಂದ ನೋಡಿದಳು. ಅವಳ ಮೆತ್ತನೆಯ ಹೂವಿನ ಹಾಸಿಗೆಯಂತಿದ್ದ ತೊಡೆಯ ಸ್ಪರ್ಶವನ್ನು ಮತ್ತೆ ಮತ್ತೆ ಸವಿಯಲು ಕಾಲನ್ನು ಸ್ವಲ್ಪ ಎತ್ತಿ ಎತ್ತಿ ಇಟ್ಟನು. ಗಂಗಿ ಸ್ವಲ್ಪವಾದರೂ ಗಂಡನ ಒಡನೆ ಸಂಸಾರ ಮಾಡಿದ್ದ ಹೆಣ್ಣು. ಆದರೆ ಗೋವಿಂದ ಹೆಣ್ಣಿನ ಕೋಮಲ ಸ್ಪರ್ಶವನ್ನು ಚೂರು ಕಂಡಿರಲಿಲ್ಲ. ಅವಳ ಕೈ ಸ್ಪರ್ಶದ ಮಾದಕತೆಯಲ್ಲಿ ಮುಳುಗಿ ಹೋದನು. ಒಲ್ಲದ ಮನಸ್ಸಿನಿಂದ ಹೇಳಿದನು
"ಸಾಕು ಬಿಡು ಗಂಗಿ. ತಿಕ್ಕಿದ್ದು"
ಅವಳು ಅವನ ಪಾದಗನ್ನು ಮೆಲ್ಲಗೆ ಎರಡೂ ಕೈಗಳಿಂದ ಹಿಡಿದು ಎತ್ತಿ, ಜೋಪಾನದಿಂದ ನೋವಾಗದಂತೆ ಕೆಳಗಿರಿಸಿದಳು ಭಕ್ತಿ ಭಾವಗಳಿಂದ.
"ನೋಡು ಈಗಾಗ್ಲೇ ಸ್ವಲ್ಪ ನೋವು ಇಳದದೆ"
"ಪಂಡಿತ್ರ್ ಎಣ್ಣೆ ಅಂದ್ರೆ ಅಂಗೇ ಧಣಿ"
"ಪಂಡಿತ್ರ್ ಎಣ್ಣೆನೊ, ನಿನ್ ಕೈಗುಣಾನೋ ಗಂಗಿ ಗೊತ್ತಿಲ್ಲ ನೋಡು."
"ತಮಾಸೆ ಮಾಡ್ತೀರಾ ಧಣಿ. ಊಟ ಮಾಡಿ ಹೊತ್ತಾಯ್ತು?" ಎಂದು ಹುಸಿನಗೆ ನಕ್ಕಳು.
"ಮಾಡ್ತೀನಿ ಮಾಡ್ತೀನಿ."
"ನಾನಿನ್ನ ಹೊರಡ್ಲಾ ಒಡೆಯ ಏನಾದ್ರು ಬೇಕಿದ್ರೆ ಹೇಳ್ ಕಳುಸ್ರಿ" ಅವಳೂ ಅವನನ್ನು ಬಿಟ್ಟು ಹೋಗಲು ಒಲ್ಲದೆ, ಒಲ್ಲದ ಮನಸ್ಸಿನಿಂದ ಕೇಳಿದಳು.
"ಅದೂ, ಅದೂ… " ಗೋವಿಂದ ಚಿಕ್ಕ ಮಕ್ಕಳು ತಾಯಿಯ ಹತ್ತಿರ ಮಿಠಾಯಿ ಕೇಳುವಾಗ ನುಲಿಯುವಂತೆ ನುಳಿದ5 ಗೋವಿಂದ.
"ಎನ್ ಹೇಳ್ರಿ ಧಣಿ. ಏನಾರ ಬೇಕಿತ್ತಾ?"
"ಏನಿಲ್ಲ, ಸಂಜೆನೊ ನೀನೇ ಬಂದು ವಸಿ ಎಣ್ಣೆ ತೀಕ್ಬಿಡ್ತಿಯ ಗಂಗಿ?" ದೈನ್ಯದಿಂದ ಕೇಳಿಕೊಂಡನು
ಗಂಗಿಯ ಮನಸ್ಸಲ್ಲಿ ಹರುಷದ ಕಟ್ಟೆಯೊಡೆದು ಆ ಹರುಷ ಸ್ವಲ್ಪ ಕಣ್ಣಲ್ಲೂ ಇಳಿಯಿತು. ಅವನ ಸೇವೆ ಮಾಡುವ ಭಾಗ್ಯ ತನ್ನದಾಯಿತಲ್ಲ ಎಂದು ಹಿರಿ ಹಿರಿ ಹಿಗ್ಗಿದ್ದಳು.
"ಅಯ್ಯೋ ನನ್ನ ಧಣಿ, ಇದ್ಯಾಕೆ ಅಂಗ ಕೇಳ್ತೀರಿ. ನೀವ್ ಕೇಳಾದ್ ಹೆಚ್ಚಾ ನಾನ್ ಬರಾದ್ ಹೆಚ್ಚಾ? ಬರ್ತೀನಿ ನನ್ನ ಧಣಿ. ನೀವು ಕೇಳ್ಕೊಬಾರ್ದು ಧಣಿ, ಬಂದು ತಿಕ್ಕು ಅಂತ ಹೇಳ್ಬೇಕು."
ಕಸಿವಿಸಿಯಿಂದ ಹೊದ್ದ ಸೆರಗಿನ ಅಂಚನ್ನು ತನ್ನ ತೋರುಬೆರಳು ಮತ್ತು ಹೆಬ್ಬೆರಳಿನಿಂದ ಹಿಡಿದು ಎಳೆದುಕೊಂಡು ಗಂಟಿಕ್ಕುತ ತಲೆಯನ್ನು ನಾಚಿಕೆಯಿಂದ ಬಾಗಿಸಿ ಹೇಳಿದಳು. ಆ ಮಾತುಗಳು ಒಡೆಯನ ಋಣದ ಭಾರ ಹೊತ್ತ ಒಬ್ಬ ಸ್ವಾಮಿನಿಷ್ಠ ದಾಸಿಯ ಮಾತುಗಳಂತೆ ಕಂಡಿತೋ, ಅಥವಾ ವಯಸ್ಸಿನಲ್ಲಿ ಗಂಡನನ್ನು ಕಳೆದುಕೊಂಡು ಯವ್ವನದ ಭಾರ ಹೊತ್ತ ಹದಿಹರೆಯದ ಹೆಣ್ಣಿನ ಮಾತುಗಳಂತೆ ಕಂಡಿತೋ ಎಂಬ ಪರಿವೆಯೇ ಇಲ್ಲದೆ ಮುಗ್ಧವಾಗಿ ನಿಂತಳು ಗಂಗೆ. ಅವಳ ಮಾತನ್ನು ಯಾವ ರೀತಿ ಅರ್ಥೈಸ ಬೇಕು ಎಂದು ಯೋಚಿಸದೆ ಅವಳ ಸ್ಪರ್ಶದ ನೆನಪನ್ನೇ ಮೆಲುಕು ಹಾಕುತ್ತಾ ಹೋಗಿ ಬಾ ಗಂಗಿ ಎಂದನು ಗೋವಿಂದ ಒಲ್ಲದ ಮನಸ್ಸಿನಿಂದ.
ಅವಳು ಹೋದ ನಂತರ ಗೋವಿಂದ ಬಡಿಸಿಕೊಂಡು ಊಟ ಮಾಡಿದನು. ಅವಳ ಸ್ಪರ್ಶದ ಗುಂಗಿನಿಂದ ಹೊರಗೆ ಬರಲು ಅವನಿಗೆ ಆಗಲೇ ಇಲ್ಲ. ತಾನು ಮಾಡಿದ್ದು ಸರಿಯೋ ತಪ್ಪೋ ಎಂಬ ಯೋಚನೆ ಕಾಡಲಾರಂಭಿಸಿತು. ಆದರೆ ಒಂದು ಮಾತ್ರ ಅವನಿಗೆ ಬಹಳ ಸ್ಪಷ್ಟವಾಗಿ ಗೋಚರಿಸಿತ್ತು. ಅವಳ ತನ್ನ ಸ್ವಇಚ್ಛೆಯಿಂದಲೇ ಅವನ ಸೇವೆಮಾಡಲು ಒಪ್ಪಿದಳು ಎಂಬುದು. ಹಿಂದೆಂದೂ ಆಗದ ಅನುಭವ - ಅವನಿಗೆ ಪುಸ್ತಕದಲ್ಲಿಯೂ ಮನಸ್ಸು ನಿಲ್ಲಲಿಲ್ಲ. ಸಂಜೆಯಾಗುವುದನ್ನೇ ಕಾತರನಾಗಿ ಕಾಯತೊಡಗಿದ. ಅವಳ ನೆನಪು ಅವನ ಕಾಲು ನೋವನ್ನೇ ಮರೆಸುವಂತಿತ್ತು. ಇತ್ತ ಗಂಗಿಯೂ ಅದೇ ದೋಣಿಯಲ್ಲಿ ತೇಲುತ್ತಿದ್ದಳು. ಸಂಜೆಗೂ ತನ್ನಿಂದಲೇ ಎಣ್ಣೆ ತಿಕ್ಕಿಸಿಕೊಬೇಕೆಂಬ ಒಡಯೆನ ಮಾತು, ಅದನ್ನಾಡುವಾಗಿದ್ದ ಅವನ ದೈನ್ಯ ಎಲ್ಲವೂ ಮನಸ್ಸಿಗೆ ಕಟ್ಟುವಂತಿತ್ತು. ಸಂಜೆಯ ಅವರ ಊಟಕ್ಕೆ ತಾನೇ ಅಡುಗೆ ಮಾಡುವುದಾಗಿ ನಿಶ್ಚಯಿಸಿದಳು. ಸ್ವಲ್ಪ ಸಿಹಿ ಅಡಿಗೆಯನ್ನು ಮಾಡಿದಳು. ಪರಪುರುಷನ ಮನೆಗೆ ಹೋಗುತ್ತಿರುವುದರಿಂದ ಇನ್ನೂ ಬೆಳಕಿರುವಾಗಲೇ ಹೋಗುವುದು ಸರಿ ಎನಿಸಿತು. ಎಣ್ಣೆ ಹಚ್ಚುವ ಮೊದಲು ಬಿಸಿನೀರನ್ನು ಹಾಕಬೇಕು ಎಂದು ಮಲ್ಲಣ್ಣ ಹೇಳಿದ್ದು ಮಧ್ಯಾಹ್ನ ಅವಳಿಗೆ ಮರೆತೇ ಹೋಗಿತ್ತು. ಎಂಥಾ ಪ್ರಮಾದವಾಯಿತೆಂದು ದುಃಖಪಟ್ಟಳು. ಸಂಜೆ ಅದನ್ನು ಮಾಡಲೇಬೇಕು ಎಂದು ಇನ್ನೂ ಸ್ವಲ್ಪ ಬೇಗನೆ ಹೋಗಬೇಕೆಂದು ನಿಶ್ಚಯಿಸಿದಳು. ಅಡುಗೆ ಮಾಡುವಷ್ಟರಲ್ಲಿ ಸಂಜೆಯಾಗಿತ್ತು. ಮಾಡಿದ ಅದಿಗೆಯನ್ನು ಪಾತ್ರೆಗಳಲ್ಲಿ ಹಾಕಿಕೊಂಡಳು. ಅವಳಿಗೆ ಅರಿವಿಲ್ಲದಂತೆ ಮುಖ ಒಮ್ಮೆ ಕನ್ನಡಿಯೆಡೆಗೆ ತಿರುಗಿತು. ನಾಚಿಕೆ, ಸಂಕೋಚ ಅವಳ ಮುಖದಲ್ಲಿ ಮುಗಿಲು ಮುಟ್ಟಿತ್ತು. ಇನ್ನು ಬೆಳಕಿರುವಾಗಲೇ ಅವರ ಮನೆಗೆ ಹೋಗಿ ಕೆಲಸ ಮುಗಿಸಿ ಬಂದುಬಿಡಬೇಕೆಂದು ಸರ ಸರನೆ ಹೊರಟಳು ಗಂಗಿ.
ಬಾಗಿಲಿನಲಿ ನಿಲ್ಲದೆ ಒಳಗೇ ಹೋದಳು. ಮಧ್ಯಾಹ್ನ ಬಂದಾಗ ಇದ್ದಷ್ಟು ಸಂಕೋಚ, ಭಯ ತುಸು ಕಡಿಮೆಯಾಗಿತ್ತು. ಆದರೂ ಸ್ರೀಸಹಜ ನಾಚಿಕೆ, ಬಿಗುಮಾನಗಳಿಂದ ಸೆರಗನ್ನು ಪೂರ್ತಿಯಾಗಿ ಹೊದ್ದು ಒಳ ಬಂದಳು.
"ಧಣಿ, ಕಾಲು ನೋವು ಹೆಂಗೈತೆ ಈಗ?"
"ಓಹ್ ಬಂದ್ಯ ಬಾ ಗಂಗಿ. ಕಾಲನೋವು ಕಮ್ಮಿ ಆಗ್ಯಾದೆ. ನೀನಷ್ಟ ತಿಕ್ಕಿದ ಮೇಲೆ ಹೆಂಗ ಉಳದಾತು ನೋವು." ಎಂದು ಎದ್ದೇಳಲು ಹೊರಟನು ಬರಿ ಪಂಚೆಯನ್ನುಟ್ಟು ಕೂತಿದ್ದ ಗೋವಿಂದ.
"ಅಯ್ಯೋ ಎಳ್ ಬ್ಯಾಡ್ರಿ ಧಣಿ. ಕೂತಕಳಿ. ಮಧ್ಯಾಹ್ನ ನಾ ಬಂದಾಗ ನಿಮ್ ಕಾಲಿಗೆ ಬಿಸ್ನೀರು ಬಿಡಾದೆ ಮರ್ತ್ಬಿಟ್ಟೆ ನೋಡಿ. ಪಂಡಿತರು ಹೇಳಿದ್ರು. ಅದನ್ನ ಈಗಾರ ಮಾಡನ ಅಂತ ವಸಿ ಬ್ಯಾಗ ಬಂದೆ." ಎಂದು ಕಯ್ಯಲ್ಲಿದ್ದ ಪಾತ್ರೆಯನ್ನು ಇಟ್ಟಳು. ಬಿಸಿನೀರ ಹಂಡೆಗೆ ಉರಿಹೊತ್ತಿಸಲು ಹೋದಳು. ಅವಳ ನಡೆ ನುಡಿ, ಅವಳು ತನ್ನ ಸೆರಗನ್ನು ಪದೇ ಪದೇ ಸರಿ ಮಾಡಿಕೊಳ್ಳುತ್ತಿದ್ದ ರೀತಿ, ಗೋವಿಂದನ್ನು ಕಣ್ಣಿಗೆ ಕಣ್ಣು ಕೊಟ್ಟು ನೋಡದೆ ನೆಲವನ್ನೇ ನೋಡಿ ಮಾತನಾಡುತ್ತಿದ್ದ ರೀತಿ ಹೀಗೆ ಪ್ರತಿಯೊಂದರಲ್ಲೂ ಅವಳ ಸ್ರೀಸಹಜ ಲಜ್ಜೆ, ನಾಜೂಕು ಎದ್ದು ಹೊಳೆಯುತ್ತಿತ್ತು. ಅವಳು ತನ್ನನು ನೋಡದೆ ಹೆಚ್ಚು ಕಾಲ ನೆಲವೆನ್ನೆ ನೋಡುತ್ತಿದುದು ಗೋವಿಂದನಿಗೆ ಅನುಕೂಲವೆ ಆಗಿ, ತನ್ನ ದೃಷ್ಟಿಯನ್ನು ಅವಳ ಮೇಲೆಯೇ ಇಟ್ಟನು. ಗಂಗಿಯನ್ನು ಅವನು ಇದಕ್ಕೆ ಮುಂಚೆ ಎಷ್ಟೋ ಬಾರಿ ನೋಡಿದ್ದರೂ ಇಂದೇಕೋ ಅವಳು ಸಂಪೂರ್ಣ ಭಿನ್ನವಾಗಿ ಕಂಡಳು. "ನಾನು ದಿನ ನೋಡುತ್ತಿದ್ದ ಗಂಗಿ ಇವಳೇನಾ" ಎಂಬಂತೆ ಆಶ್ಚರ್ಯ ಪಟ್ಟನು ಗೋವಿಂದ. ಅವಳು ಪಾತ್ರೆಯನ್ನಿಟ್ಟು ಹಿಂದೆ ತಿರುಗಿ ಹಿತ್ತಲ ಕಡೆ ನಡೆದು ಹೋಗುವಾಗ ಅವಳ ಮೈಮಾಟದಲ್ಲಾದ ಬದಲಾವಣೆಯನ್ನು ಗಮನಿಸದಿರಲಿಲ್ಲ ಗೋವಿಂದ. ಅವಳ ನಡೆ ಭಿನ್ನವಾಗಿತ್ತು, ಮಧ್ಯಾಹ್ನದಲ್ಲಿದ್ದ ಬಿಗಿ, ಭಯವಿರಲಿಲ್ಲ. ತಪ್ಪಿತಸ್ಥ ಮನೋಭಾವದಿಂದಲೇ ಅವಳನ್ನು ಹಿಂದಿನಿಂದ ನೋಡಿ ಸವಿದೇ ಬಿಟ್ಟನು, ಕಣ್ಣಲ್ಲಿ ಆ ನೋಟವನ್ನು ಸೆರೆ ಹಿಡಿದೇ ಬಿಟ್ಟನು! ಒಲೆಗೆ ಉರಿ ಹಾಕಿ ಬಂದಳು ಗಂಗಿ.
"ಇದೇನಿದು ಗಂಗಿ ಮತ್ತೆ ಊಟ ತಗಂಬಂದೆ ? ಬೆಳಿಗ್ಗೆ ಮಾಡಕಳ್ಸಿದ್ದೇ ಇನ್ನೂ ಮಿಕ್ಕದೆ"
"ಬೆಳಿಗ್ಗೆದ ಯಾಕ್ ಬಿಡಿ. ಧಣಿ. ಇದ್ ತಿನ್ನಿ. ಬಿಸೀದು ಮಾಡ್ಕಂಡು ಬಂದಿವ್ನಿ"
"ಧಣಿ, ನಿಮ್ಮನ್ನೊಂದು ಮಾತ್ ಕೇಳ್ಬೇಕು ಅಂತಿದ್ದೆ."
"ಕೇಳು ಗಂಗಿ."
"ಏನಿಲ್ಲ, ನೀವು ಐನೋರಾಗಿ, ನಮ್ಮನ್ನೆಲ್ಲ ಮುಟ್ಕೊತೀರ, ನಾವ್ ಮಾಡಿದ್ ಅಡುಗೆ ಊಟಾ ಮಾಡ್ತೀರಾ ಅಲ್ಲ, ಯಾಕೆ ಅಂತ? ಸುತ್ತ ಯಾವೂರಾಗೂ ನಿಮ್ತರ ಇರೋರ್ನ ನೋಡೆ ಇಲ್ಲ. ನನ್ ತವ್ರು ಮನೆ ಕಟ್ಟೆಮನೆಲಂತು ನಮ್ ಕೇರಿಗೆ ಬರಾಕಿಲ್ಲ ಕಾಳೆಗೌಡ್ರು" ಕುತೂಲದಿಂದ ಗೋವಿಂದನ ಕುರ್ಚಿಯ ಹತ್ತಿರ ಬಂದು ಕೆಳಗೆ ಕುಳಿತು ಕೇಳಿದಳು.
"ನೋಡು ಗಂಗಿ ನಂಗೆ ಈ ಮೇಲು ಕೀಳು, ಹೊಲೆಯ, ಬ್ರಾಹ್ಮಣ ಅಂತ ಭೇದ ಮಾಡೋದು ಚೂರು ಇಷ್ಟ ಆಗಲ್ಲ. ನಮ್ ಅಪ್ಪಯ್ಯನೂ ನಂಗೆ ಅದನ್ನೇ ಹೇಳ್ ಕೋಟಿದ್ರು. ನಾವೆಲ್ಲ ಮನುಷ್ಯರೇ. ಕೆಲವರು ತಮ್ ಬೇಳೆ ಬೇಸ್ಕೊಳಕೆ ನಾ ದೊಡ್ಡವ ನೀ ಸಣ್ಣವ ಅಂತ ಹೇಳಿ ಹಾಳ್ ಮಾಡ್ಯಾರ. ದೇವ್ರು ದಿಂಡ್ರು ಅನ್ನೋ ಹೆಸ್ರನಲ್ಲಿ ಹೊಲಸ ತಿನ್ನೋ ಕೆಲ್ಸ ಮಾಡ್ತಾರೆ. ದೇವ್ರು ಬರಿ ಒಳ್ಳೆತನ ನೋಡ್ತಾನೆ. ಜಾತಿ ನೋಡಕಿಲ್ಲ. ನಾವೆಲ್ಲ ಇನ್ನೊಬ್ರನ ಮನುಷ್ಯನ ಥರ ನೋಡೋದನ್ನ ಕಲೀಬೇಕು. ನಾಯಿಗಳತರ ಅಲ್ಲ. ನೀವು ಕೇರಿ ಅವ್ರು ಕೂಡ ನನ್ ಕಂಡಾಗ ಆಡ್ ಬಿದ್ದೆ ಅಂತೆಲ್ಲ ಅನ್ನಬಾರ್ದು"
"ಅದ್ಯಾಕೆ ಧಣಿ ಹಂಗಂತೀರ? ನೀವು ನಮ್ಗೆ ಅನ್ನ ನೀಡುವ ಧಣಿ. ನಿಮ್ಗೆ ಅಡ್ ಬೀಳ್ದೆ ಇನ್ನಾರಿಗೆ ಬೀಳನ ಹೇಳ್ರಿ?" ಎಂದು ತನ್ನ ಮುಗ್ಧತೆ ಯನ್ನು ಪ್ರದರ್ಶಿಸಿದಳು.
"ಯಾರಿಗಾದರೂ ಯಾಕ್ ಕಾಲಿಗ್ ಬೀಳ್ತಿಯ ಹೇಳು? ಹಾಂಗ್ ಬೇಳ್ಬೇಕು ಅನ್ನಂಗಿದ್ರೆ ಆ ದೇವ್ರು ಕಾಲಿಗೆ ಬೀಳು ಒಳ್ಳೇದು ಮಾಡ್ತಾನೆ. ನಾನೇನು ನಿಮ್ಗೆಲ್ಲಾ ಸುಮ್ನೆ ಅನ್ನ ಹಾಕ್ಬಿಡ್ತಿನ? ನೀವು ಮೈ ಬಗ್ಸಿ ದುಡಿಯಕಿಲ್ವ? ಹೇಳು."
"ಹೋಗ್ಲಿ ಬಿಡಿ ಧಣಿ ನಂಗಿದೆಲ್ಲ ಅರ್ಥ ಆಗಾಕಿಲ್ಲ. ನೀವು ನಮ್ಗೆ ದೇವ್ರ ಸಮಾನ. ಸುತ್ತ ಹತ್ತೂರಲ್ಲಿ ನಿಂಹಂತ ಧಣಿ ಯಾರ್ ಅವ್ರೆ ಹೇಳಿ. ನಿಮ್ಮ ಆಳ್ಗಳನ್ನ ಮನೆಯೋರ ಥರ ನೋಡ್ತೀರಾ. ನಿಮ್ಗೆ ಆಡ್ ಬೀಳದ್ರಲ್ಲಿ ಎನ್ ತಪ್ಪೈತೆ? ಈಗ ಬನ್ನಿ ನೀರು ಬಿಸಿ ಆಗಿರತದೆ." ಎಂದು ತನ್ನ ವಾದವನ್ನೇ ಸಮರ್ಥಿಸಿ ಗೋವಿಂದನನ್ನು ಪೇಚಿಗೆ ಸಿಲುಕಿಸಿದಳು.
ಎದ್ದೇಳಲು ಪ್ರಯತ್ನಿಸಿದನು ಗೋವಿಂದ. ಅವನ ಬಳಿ ಓಡಿ ಬಂದು ಸಂಕೋಚವಿಲ್ಲದೆ ಅವನ ಕಯ್ಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡು ಅವನಿಗೆ ಆಸರೆಯಾದಳು. ಅವನ ಕೈ ಅವಳ ಭುಜದ ಮೇಲೆ ಬೀಳುತ್ತಲೇ ಗೋವಿಂದನ ಮೈ ಪುಲಕಿತವಾಯಿತು. ಮೆಲ್ಲಗೆ ತನ್ನ ಭಾರವನ್ನು ಅವಳ ಹೆಗಲ ಮೇಲೆ ಹಾಕಿ ಅವಳ ಸೀರೆಯ ಸೆರಗಿನಿಂದ ಮುಚ್ಚಲ್ಪಟ್ಟ ಅವಳ ಚರ್ಮದ ಸ್ಪರ್ಶವನ್ನು ಆಸ್ವಾದಿಸಿದನು. ಅವಳಿಗೂ ಅವನ ಬರಿಮೈ ತಾಕಿ ಮೈಯಲ್ಲ ರೋಮಾಂಚನಗೊಂಡಿತು. ಗೋವಿಂದನಿಗೆ ಕಸಿವಿಸಿಯಾಗಿ "ಗಂಗಿ, ಇದು ಸರಿ ಹೋಗಾಕಿಲ್ಲ ಬಿಸಿನೀರಿನ ವಸಿ ಇಲ್ಲೇ ತಂಡ್ಬಿದು." ಎಂದು ದೈನ್ಯದಿಂದ ಕೇಳಿದನು.
"ನೀವ್ ಹೇಳ್ದಂಗೆ ಆಗ್ಲಿ ಧಣಿ" ಎಂದು ನೀರು ತರಲು ಹೋದಳು. ತನಗೆ ಆಗಿದ್ದ ಆ ಅನುಭವವನ್ನು ಜೀರ್ಣಸಿಕೊಳ್ಳುವುದು ಕಷ್ಟವಾಗಿತ್ತು ಅವನಿಗೆ. ಅವಳು ದೊಡ್ಡ ಪಾತ್ರೆಯಲ್ಲಿ ಬಿಸಿನೀರು ತರುವಾಗ ಅವನ ಕಣ್ಣಿಗೆ ಹಬ್ಬವೇ ಕಾದಿತ್ತು. ಅವಳ ತುಂಬು ಸೆರಗು ಜಾರಿ ಅವಳ ಬಲ ಭುಜ ತೋರುತ್ತಿತ್ತು. ಅವಳು ನಡೆದು ಅವನೆಡೆಗೆ ಬಂದಂತೆಯೇ ಕುಪ್ಪಸರಹಿತವಾದ ಅವಳ ಬಲ ಸ್ತನದ ಅಲ್ಪ ಭಾಗ ಗೋಚರಿಸಿ ಅವನ ಕಣ್ಣನ್ನು ತುಂಬಿತ್ತು. ಅವಳ ದೃಷ್ಟಿ ಕೆಳಗೇ ನೆಟ್ಟಿರುವುದರಿಂದ ಅವಳನ್ನು ಕಣ್ತುಂಬ ನೋಡಿ ಸವಿದನು. ಗಂಗಿ ಅವನ ಶುಶ್ರೂಷೆಯನ್ನು ಪ್ರಾರಂಭಿಸಿದಳು. ಅವಳ ಸ್ಪರ್ಷವಾದಾಗ ಮತ್ತದೇ ರೋಮಾಂಚನ. ಬಿಸಿನೀರಿನ ಉಷ್ಣ ನೀಡುವುದಕ್ಕಿಂತ ಅನೇಕ ಪಟ್ಟು ಮುದ ಅವಳ ಕೈಸ್ಪರ್ಷ ನೀಡಿತ್ತು. ಕುಪ್ಪಸವಿಲ್ಲದ ಅವಳ ಬಗಲಿನಿಂದ ಅವಳ ಸಪುಷ್ಠವಾದ ಸ್ತನ ತುಂಟತನದಲಿ ಇಣುಕಿ ನೊಡುತ್ತಿತ್ತು. ತನ್ನ ಕಸಿವಿಸಿಯನ್ನು ಅದುಮಿಟ್ಟುಕೊಳ್ಳಲು ಶತಪ್ರಯತ್ನ ಮಾಡಿದನು. ಕಡೆಗೆ ಸೋತು "ಗಂಗಿ, ನೀರಹಾಕಿದ್ದು ಸಾಕು" ಎಂದು ಹೇಳಿದನು. ಗಂಗಿ ಅವನ ಕಾಲು ಒರೆಸಿ ಎಣ್ಣೆಯನ್ನು ತಿಕ್ಕಿದಳ. ನಂತರ ಎದ್ದು ನಿಂತ ಗಂಗಿ "ನಾನಿನ್ನು ಬರ್ತೀನಿ ಧಣಿ" ಎಂದಳು.
"ಬರ್ತೀಯ ಗಂಗಿ?" ಎಂದು ಅಸಹಾಯಕನಾಗಿ ಕೇಳಿದನು.
"ಹೂ ಧಣಿ. ಹೊತ್ತು ಮುಳುಗ್ತಾ ಐತೇ. ನಿಮಗೆ ಇನ್ನೂ ಏನಾದ್ರು ಬೇಕೇನು?"
"ಇಲ್ಲಾ, ಏನಿಲ್ಲ. ಅದೂ, ಅದೂ… ನಾಳೆನೂ ಬರ್ತೀಯ ಅಲ್ಲ? "
"ಹೂ ಧಣಿ. ನಿಮ್ ಕಾಲ್ ಸರಿ ಹೋಗ ಗಂಟ ನಿಮ್ ಸೇವೆ ಮಾಡೋ ಭಾಗ್ಯ ನಂದು. ಸಂಕೋಚ ಪಟಗ ಬ್ಯಾಡ್ರಿ ನಿಮಗೇನರ ಬೇಕಿದ್ರೆ ಹೇಳ್ರಿ ಧಣಿ" ಎಂದು ಹೇಳಿ ಮಾಯವಾದಳು.
ಗೋವಿಂದ ಊಟ ಮಾಡಿ ಮಲಗುವ ವಿಫಲ ಪ್ರಯತ್ನ ಮಾಡಿದ. ಕಣ್ಣು ಮುಚ್ಚಿದರೂ ಗಂಗಿಯ ಆಕೃತಿಯೇ ಕಾಣುತ್ತಿತ್ತು. ಗಂಗಿಯ ಗುಂಗಿನಲ್ಲೇ ಮುಳುಗಿ ಹೋದನು. ಅವಳ ನಡಾವಳಿಯಲ್ಲಿ ಆದ ಬದಲಾವಣೆ ಅವನ ತಲೆಯನ್ನು ಕೆಡಿಸಿತು.
"ಮಧ್ಯಾಹ್ನ ತುಂಬು ಸೆರಗು ಹೊದ್ದವಳು ಸಂಜೆಯಾಕೆ ಅಷ್ಟು ಸಲಿಗೆಯಿಂದ ಇದ್ದಳು?", "ಅವಳು ಬೇಕೆಂದೇ ನಾನು ನೋಡಲಿ ಎಂದು ಆ ರೀತಿ ಮಾಡಿದಳೇ?", "ಅವಳಿಗೆ ನನ್ನ ಮೇಲೆ ಮನಸ್ಸಿದ್ದರೆ, ನನನ್ನು ಕೆಳಬಾರದೇಕೆ?" ಎಂದು ತನ್ನ ಯೋಚನಾಲಹರಿಯನ್ನು ಹರಿಬಿಟ್ಟನು. "ಅವಳು ಹೆಣ್ಣು. ಪಾಪ ವಿಧವೆ ಬೇರೆ. ಅವಳು ಅದು ಹೇಗೆ ಹೇಳುತ್ತಾಳೆ ನನ್ನಲಿ ಅಂತ ಸೂಕ್ಷ್ಮವನ್ನ" ಎಂದೆಲ್ಲ ಸಮಾಧಾನ ಹೇಳಿಕೊಂಡನು. ಇತ್ತ ಗಂಗಿಯ ಸ್ಥಿತಿಯೇನು ಬೇರೆಯಾಗಿರಲಿಲ್ಲ. ತನ್ನ ದೃಷ್ಟಿ ಯಾವಾಗಲೂ ಕೆಳೆಗೇ ನೆಟ್ಟಿದ್ದರೂ, ಗೋವಿಂದ ತನ್ನೆಡೆಗೆ ನೋಡುತ್ತಿದುದು ಅವಳ ಗಮನಕ್ಕೆ ಬಂದಿತ್ತು. ತಾನು ಗೋವಿಂದನ ಆಳು, ಗೋವಿಂದಗೆ ತನ್ನ ಮೇಲೆ ಸಂಪೂರ್ಣ ಅಧಿಕಾರವಿದ್ದು ತನ್ನನು ಏಕೆ ಕೇಳುತ್ತಿಲ್ಲ ಎಂದು ಯೋಚಿಸಿದಳು. ಅವರು ಎಷ್ಟೇ ಆದರೂ ಮೇಲ್ಜಾತಿಯವರು ಮತ್ತು ತಾನೊಬ್ಬ ನತದೃಷ್ಟ ವಿಧವೆ ಎಂದು ಸುಮ್ಮನಾದಳು.
ಮರುದಿನ ಬೆಳಿಗ್ಗೆ ಅವನ ಊಟೋಪಚಾರ, ಪಾದಸೇವೆ ನೆರವೇರಿತು. ಇಬ್ಬರಲ್ಲೂ ಮತ್ತದೇ ರೋಮಾಂಚನ, ಅದೇ ಕಳ್ಳನೋಟಗಳು, ಅದೇ ವಿರಹ. ಅವನ ಕಾಲುನೋವು ಕಡಿಮೆಯಾಗಿ ಕುಂಟಾಗಲಿನಲ್ಲಿ ನಡಿಯುವಂತಾಗಿತ್ತು ಮಧ್ಯಹ್ನದ ವೇಳೆಗೆ. ಸಂಜೆ ಮಳೆ ಜೋರಾಗಿ ಬೀಳುತ್ತಿತ್ತು. ಗಂಗಿ ಮಳೆ ನಿಲ್ಲಬಹುದೆಂದು ಕಾದಳು. ಹಾಗಾಗಿ ತುಸು ತಡವಾಗಿಯೇ ಹೊರಟಳು ಕಂಬಳಿ ಹೊದ್ದು.
"ಮಳೇಲಿ ನೆನಕೊಂಡು ಬಂದ್ಯಾ ಗಂಗಿ? ಇವತ್ತು ಬರ್ದೇ ಇದ್ರೇನು ಆಗಹೋಗ್ತಿತ್ತು ನೋಡು. ನನ್ ಕಾಲು ವಾಸಿ ಆಗ್ಯದೆ."
ಗಂಗಿ ಒಳಗೊಳಗೇ ಮುನಿಸಿಕೊಂಡಳು.
"ಹಂಗಾರೆ ಹೋಗ್ಬಿಡ್ಲಾ ಧಣಿ?" ಎಂದಳು ತುಸು ಕೋಪದಲ್ಲಿ.
"ಅಯ್ಯೋ ಮಾರಾಯ್ತಿ ಹಂಗ್ ಹೇಳಿಲ್ಲ ನಾನು. ಮಳೆ ಬರ್ತಿತ್ತಲ್ಲಾ, ಹೊತ್ತಾಗದೆ. ಅದಕ್ಕೆ ಹಂಗ್ ಹೇಳ್ದೆ. ನೀ ಬರ್ತೀಯೋ ಇಲ್ಲೋ ಅಂತ ಕಾಯ್ತಾ ಇದ್ದೆ." ಗಂಗಿ ಮುಖ ಅರಳಿತು. ಅವನು ತನ್ನ ಬರುವಿಕೆಯನ್ನು ಕಾಯುತ್ತಿದ್ದ ಎನ್ನುವಿದನ್ನು ಕೇಳಿ ಅವಳ ಕೆನ್ನೆ ಕೆಂಪಾಯಿತು. ನಾಚಿಕೆಯ ನಗು ನಕ್ಕು ಹಂಡೆಗೆ ಉರಿ ಹಾಕಲು ಹೋದಳು. ತುಸು ಹೊತ್ತಿನ ನಂತರ ಬಿಸಿನೀರನ್ನು ತಂದಳು. ತಂಬಿಗೆಯಲ್ಲಿ ಬಿಸಿನೀರನ್ನು ಮೊಗೆದು ತರುವಾಗ ಅವಳ ಒದ್ದೆಗಾಲು ಜಾರಿತು. ತಂಬಿಗೆಯನ್ನು ಕೈಬಿಟ್ಟಳು. ಧಪ್ಪೆಂದು ಗೋವಿಂದನ ಮೈಮೇಲೆ ಬಿದ್ದಳು. ಅವನ ಎರಡೂ ಕೈಗಳು ಗಂಗಿಯ ಸೊಂಟವನ್ನು ಹಿಡಿದವು. ಅವಳ ಕೈಗಳು ಗೋವಿಂದನ ಎದೆಯ ಮೇಲೆ ಊರಿದಳು. ಆದರೂ ಆಯ ತಪ್ಪಿ ಅವನ ಮೇಲೆ ಬಿದ್ದೆ ಬಿಟ್ಟಳು. ಅವಳ ಎದೆ ಅವನ ಎದೆಗೆ ಒತ್ತಿತು. ಅವನ ಕೈಗಳು ಅವನಿಗರಿವಿಲ್ಲದೆ ಅವಳ ಸೊಂಟವನ್ನು ಒತ್ತಿದವು.
ಆ ಘಟನೆ ಇಬ್ಬರ ಕಲ್ಪನೆಗೂ ಅತೀತವಾಗಿತ್ತು. ಅರೆ ಕ್ಷಣ ಜ್ಞಾನ ತಪ್ಪಿದಂತಾಯಿತು ಇಬ್ಬರಿಗೂ. ತಮಗರಿವಿಲ್ಲದೆಯೇ ಆ ಆಕಸ್ಮಿಕ ಆಲಿಂಗನವವನ್ನು ಸವಿದರು. ಅವಳ ಸೊಂಟದ ಮೃದುತ್ವವನ್ನು ಇನ್ನೂ ಗಟ್ಟಿಯಾಗಿ ಒತ್ತಿ ಅನುಭವಿಸಿದನು. ಅವಳೂ ತನ್ನ ಒಡೆಯನ ನಗ್ನ ಎದೆಯ ಮೇಲೆ ಕೈಯನ್ನು ಒತ್ತಿ ಅವನ ದಷ್ಟಪುಷ್ಟವಾದ ಮಯ್ಯನ್ನು ಆಸ್ವಾದಿಸಿಯೇಬಿಟ್ಟಳು. ಅವಳ ಸ್ತನಗಳ ಮೇಲ್ಭಾಗವನ್ನು ಕಣ್ಣಲ್ಲೇ ತುಂಬಿಕೊಂಡನು ಗೋವಿಂದ. ಏನೂ ಮಾಡಲು ತಿಳಿಯದಾಯ್ತು. ತಕ್ಷಣ ಎದ್ದು ಬಾಗಿಲ ಕಡೆ ಓಡಿದಳು ಗಂಗಿ ತನ್ನ ಸೆರಗನ್ನು ಸರಿಮಾಡಿಕೊಂಡು, ನಾಚಿಕೆಯನ್ನು ತಡೆಯಲಾರದೆ.
"ಗಂಗಿ, ಎಲ್ ಓಡ್ತಿದೀಯಾ. ಬಾ ಇಲ್ಲಿ. " ಎಂದು ಎದ್ದು ನಿಂತು ಕೂಗಿದನು ಅಧಿಕಾರವಾಣಿಯಿಂದ.
ಗಂಗಿ ಕಲ್ಲಾಗಿ ಅಲ್ಲೇ ನಿಂತಳು ಅವಕ್ಕಾಗಿ. ಹಿಂದೆತಿರುಗಿ ಒಡೆಯ ಗೋವಿಂದನಿಗೆ ಮುಖ ತೋರದಷ್ಟು ನಾಚಿಕೆ.
"ಇಲ್ಲಿ ಬಾ ಅಂದೆ ಗಂಗಿ" ಗದರಿಸಿದನು ದರ್ಪದಿಂದ.
"ಕ್ಷಮಿಸ್ರಿ ಧಣಿ ಕಾಲ್ ಜಾರಿತು." ಮೆಲ್ಲಗೆ ಹಿಂತಿರುಗಿ ಬಂದು ನಾಚಿ ತಲೆ ಬಗ್ಗಿಸಿ ನಿಂತಳು ಗಂಗೆ. ಗೋವಿಂದನಿಗೆ ತಡೆಯಲು ಆಗಲಿಲ್ಲ. ಕೇಳಿಯೇಬಿಟ್ಟನು.
"ಗಂಗಿ, ನಂಗೆ ನೀನಂದ್ರೆ ಇಷ್ಟ. ನಿನ್ ಬಿಟ್ಟ ಇರಲಿಕ್ಕೆ ಆಗ್ತಾ ಇಲ್ಲಾ ನಂಗೆ. ನೀ ನಂಗೆ ಬೇಕು!"
ಅವನು ಹಾಗೆ ಹೇಳಿದ ಕೂಡಲೇ ಗಂಗೆ ಓಡೋಡಿ ಬಂದು ಅವನ ಕಾಲಿಗೆ ಬಿದ್ದಳು. ಅವಳು ನಾಚಿ ನೀರಾಗಿದ್ದಳು. ಅವಳನ್ನು ಎತ್ತಿ ಗೋವಿಂದ ಅವಳನ್ನು ಗಟ್ಟಿಯಾಗಿ ಆಲಿಂಗಿಸಿದ. ಅವಳು ಅವನನ್ನು ಅಷ್ಟೇ ಗಟ್ಟಿಯಾಗಿ ಆಲಿಂಗಿಸಿ ಅಲ್ಲೇ ತನ್ನ ಸಮ್ಮತಿಯನ್ನು ಸೂಚಿಸಿದಳು. ಆದರೂ ತುಸು ಅವಕ್ಕಾಗಿದ್ದ ಗೋವಿಂದ ಅವಳನ್ನು ತನ್ನ ಆಲಿಂಗನದಿಂದ ಬೇರ್ಪಡಿಸಿ ಕೇಳಿದನು.
"ಗಂಗಿ, ನಿಂಗೂ ನಾ ಇಷ್ಟಾನ? ಇಷ್ಟ ಇದ್ರೆ ಮಾತ್ರನೇ ಇದು ಮುಂದುವರಿತದೆ. ನಿಂಗೆ ಯಾವ್ ಬಲವಂತನೂ ನಾ ಮಾಡಲ್ಲ. ನಿಂಗೆ ಇಷ್ಟ ಇಲ್ಲಾ ಅಂದ್ರೆ ನಾ ನಿನ್ ತಂಟೆಗೂ ಬರಾಕಿಲ್ಲ. ಮುಂಚೆ ಹೆಂಗಿದ್ವ್ ಹಂಗೆ ಇರ್ರೀನಿ. ನಿನ್ ಕೂಲಿಗೂ ನಾಯೇನು ಅಡ್ಡಿ ಮಾಡಲ್ಲ. ನಾನ್ ನಿನ್ನ ಕಣ್ಣೇತ್ತೂ ನೋಡಕಿಲ್ಲ." ಬಹಳ ಹೊತ್ತು ನಿಲ್ಲಲಾಗದೆ ಕುಳಿತನು. ಮತ್ತೆ ಗಂಗಿ ಅವನ ಕಾಲಿಗೆ ಬಿದ್ದು ಬಿಕ್ಕಿ ಅಳತೊಡಗಿದಳು.
"ನಾ ನಿಮ್ಮಂತ ದ್ಯಾವರಿಗೆ ಇಷ್ಟ ಆಗಿದ್ದೆ ನನ್ ಪುಣ್ಯ ನನ್ ಒಡೆಯ. ನನ್ ದ್ಯಾವ್ರು ನೀವು. ನಿಮ್ ಸುಖ ಅಲ್ದೆ ಬೇರೆ ಏನ್ ಐತೆ ನಂಗೆ ಒಡೆಯ. ದೊಡ್ಡೋರು ನೀವು ನನ್ ದೊರೆ. ನಿಮ್ ಸೇವೆ ಮಾಡೋ ಭಾಗ್ಯ ನಂದಾದ್ರೆ ಅಷ್ಟೇ ಸಾಕೂ." ಅವನ ಕಾಲನ್ನು ಬಿಗಿಯಾಗಿ ಅಪ್ಪಿಕೊಂಡು ಹೇಳಿದಳು.
"ನೋಡು ಗಂಗಿ. ಮತ್ತೆ ಹೇಳ್ತಿನಿ. ಧಣಿ, ಒಡೆಯ ಅದ್ಯಲ್ಲ ಆಮ್ಯಾಕೆ. ನಿಂಗೆ ಇಷ್ಟ ಇದ್ರೆ ಮಾತ್ರ ನಾ ನಿನ್ನ ಮುಟ್ತೀನಿ. ಇಲ್ಲಾಂದ್ರೆ ನಾ ನಿನ್ನ ಕೆಣ್ಣೆತ್ತು ನೋಡದಿಲ್ಲ. ನೀನು ಬೇಕೆಂದ್ರೆ ಕೂತು ಯೋಚನೆ ಮಾಡಿ ನಿರ್ಧಾರ ಮಾಡು. ನೆನ್ನೆ ನೀ ಬಂದು ಹೋದಾಗಿನಿಂದ, ನಂಗೆ ನಿನ್ನ ಮರಿಲಿಕ್ಕೆ ಆಗ್ತಾ ಇಲ್ಲಾ. ಕಣ್ಣ ಮುಚ್ಚಿದ್ರೋ ನೀನೆ ಕಾಣ್ತೀಯ. ನನ್ನ ಮನಸ್ಸಿಗೆ ಅನಿಸಿದ್ದನ್ನ ನಿಂಗೆ ಹೇಳ್ಬಿಡ್ಬೇಕು ಅಂತ ಹೇಳ್ಬಿಟ್ಟೆ. ನಿಂಗೆ ಒಪ್ಪಕೆ ಇಲ್ಲಾ ಅಂದ್ರೆ ಹೇಳ್ಬಿಡು."
"ಅಯ್ಯೋ ಯಾಕ್ ಹಂಗಂದೀರಾ ಧಣಿ. ನಂಗೂ ನೀವಂದ್ರೆ ಇಷ್ಟ ಒಡೆಯ. ನಿನ್ನೆ ನೀವು ಬಚ್ಚಣ್ಣನ ಕಳ್ಸು ಅಂದಾಗ ನಂಗೆ ಕ್ವಾಪ ಬಂದಿದ್ದು ಅದಿಕ್ಕೆ ನನ್ ಧಣಿ. ಆದ್ರೆ ನಾನು ಹೊಲೇರಕಿ. ನಿಮ್ ಜೀತದಾಳು. ನೀವು ನನ್ನಂಥ ಯೇಟ್ ಜನಕೆ ಅನ್ನೋ ಕೊಡ ಧಣಿ. ಐನೋರು. ನಿಮ್ ಕಣ್ಣು ನನ್ ಮೇಲೆ ಬಿದ್ದಿರದೇ ನನ್ ಪುಣ್ಯ ನನ್ ದೊರೆ. ನೀವೇನೋ ಇದ್ರಾಗೆಲ್ಲ ನಂಬಿಕೆ ಇಲ್ಲಾ ಅಂತ ಹೇಳ್ತೀರಾ. ಜನಾ ಬಾಯಿಗೆ ಬಂದಂಗೆ ಮಾತಾಡತಾರೆ ಧಣಿ"
"ಜನರ ಮಾತು ಕಟ್ಕೊಂಡು ಏನ್ ಸುಖ ಗಂಗಿ. ಇವತ್ತು ಮಾತಾಡ್ತಾರೆ ನಾಳೆ ಸುಮ್ಮನಿರ್ತಾರೆ. ನೀನ್ ಹೂ ಅಂದ್ರೆ ಮುಂದಿನದು."
"ನನ್ನೊಡೆಯ ನನ್ನಉಸುರು ಇರೋವರ್ಗು ನಿಮ್ ಸೇವೆ ಮಾಡ್ಕೊಂಡು ಇರ್ತೀನಿ ನನ್ ಧಣಿ. ಗಂಡ ದಿಕ್ಕಿಲ್ದ ವಿಧವೇ ನಾನು. ಇನ್ಮುಂದೆ ನೀವೇ ನಂಗೆಲ್ಲಾ ಒಡೆಯ" ಎಂದು ಅವನ ಕಾಲನ್ನು ಮತ್ತಷ್ಟು ಬಿಗಿಯಾಗಿ ಅಪ್ಪಿದಳು. ಅವಳ ಕಣ್ಣೇರು ಅವನ ಮೊಣಕಾಲಿನ ಸ್ಪರ್ಶ ಮಾಡಿತು. ಎಷ್ಟೋ ವರ್ಷಗಳಿಂದ ಅವಳ ಜೀವನದಿಂದ ಮಾಯವಾಗಿದ್ದ ಸಮಾಧಾನ ಅವಳಲ್ಲಿ ಮನೆ ಮಾಡಿತ್ತು. ಭವಿಷ್ಯದ ಕುರಿತು ಏನನ್ನು ಲೆಕ್ಕಿಸದೆ, ಜನರು ಆಡಿಕೊಳ್ಳಬಹುದಾದ ಮಾತುಗಳು ಗೊತ್ತಿದ್ದೂ ತನ್ನನ್ನು ತಾನು ತನ್ನ ಒಡೆಯನಿಗೆ ಅರ್ಪಿಸಿಕೊಳ್ಳಲು ಸಿದ್ಧಳಾದಳು ಗಂಗಿ. ಹದಿಹರೆಯದ ವಯಸ್ಸಿನಲ್ಲಿ ಗಂಡನ ಆಶ್ರಯವಿಲ್ಲದೆ ಬರಡಾಗಿದ್ದ ಅವಳ ದೇಹದಲ್ಲಿ ಆಸೆಯ ಚಿಲುಮೆ ಉಕ್ಕಿತ್ತು. ಗೋವಿಂದ ಅವಳ ರಟ್ಟೆಯನ್ನು ಹಿಡಿದು ಅವಳನ್ನು ಮೇಲೆತ್ತಿ ತಾನೂ ಎದ್ದು ಅವಳ ಕಣ್ಣನ್ನು ಒರೆಸಿದನು. ಬಿಗಿದಪ್ಪಿದನು. ಅವಳ ಮೃದುವಾದ ಎದೆಯ ಸ್ಪರ್ಶವನ್ನು ಸವಿದನು. ಅವಳೂ ಅವನ ಬೆತ್ತಲೆ ಬೆನ್ನ ಮೇಲೆ ಮನಬಂದಂತೆ ಕೈ ಆಡಿಸಿ ಸವಿದಳು.
"ಗಂಗಿ, ನಂಗೆ ತಡಿಯಕ್ಕೆ ಆಗ್ತಿಲ್ಲ ಕಣೆ ಗಂಗಿ. ನಂಗೆ ನೀನೀಗಲೇ ಬೇಕು ಕಣೆ. ಬಾಗ್ಲು ಹಾಕಿ ಬರ್ತೀಯ?"
"ಒಡೆಯ, ಒಂದ್ ವಿಸ್ಯ. ನೀವಿಂಗೆ ನಂಗೆ ಏನೂ ಕೇಳ್ಬಾರ್ದು. ನೀವು ನನ್ ಧಣಿ. ನಾನು ನಿಮ್ ಹೆಣ್ಣಾಳು. ನಿಮಗೇನ್ ಬೇಕಿದ್ರೂ ನಂಗೆ ನೀವು ಆವಾಗ ಹೇಳಿದ್ರಲ್ಲ 'ಗಂಗಿ, ಬಾ ಇಲ್ಲಿ ನಿಂತ್ಕೋ ' ಅಂತ, ಹಂಗೆ ಅಪ್ಪಣೆ ಕೊಡ್ಬೇಕು. ನೀವ್ ಹಂಗಿದ್ರೆನೆ ಚಂದ. ಹಿಂಗೆಲ್ಲ ಬೇಡ್ಕಳದು ಸಂದಾಕಿಲ್ಲ ನೋಡ್ರಿ ನನ್ನ ಒಡೆಯ" ನಾಚಿ ನೀರಾಗಿದ್ದಳು ಗಂಗಿ.
"ಆಯಿತು, ಸರಿ ಗಂಗಿ. ನಂಗೀಗಲೇ ನೀ ಬೇಕು ಕಣೆ ಗಂಗಿ. ಹೋಗಿ ಬಾಗ್ಲು ಹಾಕಿ ಬಾ "
"ಹಂಗಂನ್ರಿ ಧಣಿ. ನೀವು ಹಿಂಗಿದ್ರೆನೆ ಚಂದ ದೊರೆ "
ಗಂಗಿ ಬಾಗಿಲು ಹಾಕಿದಳು. ಒಳಗೊಳಗೇ ಹೇಳತೀರದಷ್ಟು ಸಂತೋಷ. ಯಾರಿಗೂ ಸಿಗದ ಒಡೆಯನ ಸೇವೆಯ ಭಾಗ್ಯ ತನ್ನದಾಯಿತು ಎಂದು.
"ಧಣಿ ನಿಮ್ ಕಾಲು ಇನ್ನೂ ಸರಿಹೋಗಿಲ್ಲ ಒಡೆಯ. "
"ನನ್ ಕಾಲ್ ಮನೆ ಹಾಳಾಗ್ ಹೋಗ್ಲಿ. ನಂಗೆ ಈಗ್ಲೇ ನೀನ್ ಬೇಕು ಕಣೆ. ಬಾ ನನ್ನ ಮಂಚಕ್ಕೆ ಕರ್ಕೊಂಡು ಹೋಗು "
"ಬಂದೆ ನನ್ ದೊರೆ ನಿಮ್ ಕೈ ಕೊಡ್ರಿ." ಎಂದು ಅವನ ಕಯ್ಯನ್ನು ತನ್ನ ಹೆಗಲ ಮೇಲೆ ಹಾಕಿಕೊಂಡಳು. ನಿಸ್ಸಂಕೋಚವಾಗಿ ಅವಳ ಮಯ್ಯಿಗೆ ಮೈ ಉಜ್ಜುತ್ತಾ ಅವಳ ಆಸರೆ ಪಡೆದನು. ಅವನನ್ನು ಮಂಚದ ಮೇಲೆ ಕೂರಿಸಿದಳು. ಬಗ್ಗಿ ಅವನ ಪಾದಸ್ಪರ್ಶ ಮಾಡಿ ಭಕ್ತಿಯಿಂದ ಕಣ್ಣಿಗೊತ್ತಿಕೊಂಡಳು.
"ಯಾಕೆ ಗಂಗಿ ಇದೆಲ್ಲ "
"ನನ್ ದೊರೆ ನೀವು. ಈಟೆಲ್ಲ ಕೊಟ್ಟಿರ ನಂಗೆ. ಈಗ ನಿಮ್ ಸೇವೆ ಮಾಡೋ ಭಾಗ್ಯ ಕೊಟ್ಟಿರ. ನನ್ ದ್ಯಾವ್ರು ನೀವು. ದ್ಯಾವರಿಗೆ ಅದಿಕ್ಕೆ ಮದ್ಲು ನಮಸ್ಕಾರ ಮಾಡ್ಬೇಕು. "
"ಸರಿ ಬಾ ಈಗ ಇಲ್ಲಿ ಕೂತ್ಕೋ. " ಎಂದು ಅವನ ತೊಡೆಯ ಕಡೆಗೆ ಸನ್ನೆ ಮಾಡಿದನು. ನಾಚಿಕೆಯಿಂದ ತಲೆ ಎತ್ತಲಾರದೆ ಅವನ ತೊಡೆಯ ಮೇಲೆ ಕುಳಿತಳು ಗಂಗಿ. ಅವಳ ಮೃದುವಾದ ನಿತಂಬಗಳು ಅವನ ತೊಡೆಯ ಮೇಲೆ ಊರಿದ ತಕ್ಷಣ ಇಬ್ಬರ ಮಯ್ಯಲ್ಲೂ ರೋಮಾಂಚನ. ಅವನು ಅವಳ ಸೊಂಟದ ಮೇಲೆ ತನ್ನ ಕೈಯ್ಯನ್ನಿಟ್ಟನು. ಅವಳ ಮೃದುತ್ವ ಅವನ ಕಲ್ಪನೆಗೂ ಮೀರಿತ್ತು. ಅವಳ ಚರ್ಮದ ಪ್ರತಿ ಕಣವೂ ಅವನ ಸ್ಪರ್ಶವನ್ನು ಕಾತರದಿಂದ ಕಾಯುತ್ತಿತ್ತು.
"ನಿಮ್ ಕಾಲಿಗೆ ನೋವಾದ್ರೆ ಹೇಳ್ರಿ ಧಣಿ. ನಿಮಗೆ ಹೆಂಗ್ ಅನುಕೊಲನೋ ಹಂಗೆ ನಾನು ನಿಮಗೆ…. " ನಾಚಿ ಮೌನವಾದಳು ಗಂಗಿ.
"ನಂಗೆ… ಏನ್ ಹೇಳೇ "
"ನಿಮಗೆ.. ಏನ್ ಬೇಕೋ ಅದುನ್ನ ಕೊಡ್ತೀನಿ " ನಾಚಿಕೆಯ ಮುಗುಳ್ನಗಿಯಿಂದ ತಲೆ ತಗ್ಗಿಸಿ ಹೇಳಿದಳು.
"ಯೇಟ್ ಚಂದ ಕಾಣುಸ್ತೀಯ ಗಂಗಿ ನೀನು ನಾಚ್ಕೊಂಡಾಗ. ಎಲ್ಲಿಟ್ಟಿದ್ಯೇ ಈ ಚಂದಾನ ಇಷ್ಟ್ ದಿವಸ?" ಎಂದು ಅವಳ ಸೊಂಟವನ್ನು ಗಟ್ಟಿಯಾಗಿ ಉಜ್ಜುತ್ತಾ ಅವಳ ಕೆನ್ನೆಗೆ ಒಂದು ಮುತ್ತನಿತ್ತನು. ಅವನ ಸ್ಪರ್ಶವನ್ನು ಸವಿಯುತ್ತ ಮೌನವಾಗಿದ್ದಳು ಗಂಗಿ.
"ನಾನಂದ್ರೆ ನಿಂಗೆ ಇಷ್ಟ ಅಂದ್ಯೆಲ್ಲ ಅವಾಗ, ಮತ್ತೆ ನೀನು ಮೊದ್ಲೇ ಯಾಕೆ ನಂಗೆ ಹೇಳ್ಳಿಲ್ಲ? ನೀನೆ ನನ್ಹತ್ರ ಬಂದಿದ್ರೆ ಯಾವತ್ತೋ ಈ ರೀತಿ ಸುಖ ಅನುಭವಸ್ಬಹುದಾಗಿತ್ತು ನೋಡು"
"ಅಯ್ಯೋ ಒಡೆಯ, ನಾನು ಹೆಣ್ಣ್ ಹೆಂಗ್ಸು, ನಿಮ್ ಒಕ್ಕ್ಲಾಗೆ ದುಡಿಯೋ ಆಳು ಹೊಲೇರ ಹೆಣ್ಣು. ಗಂಡ ಸತ್ತ ವಿಧವೆ ನಿಮ್ಹತ್ರ ಬಂದು ನೀವು ನಂಗೆ ಇಷ್ಟ ಅಂತ ಹೇಳಕ್ಕೆ ಆಯ್ತದಾ ಶಿವ ಶಿವ?"
ಅವಳ ಮಾತು ಸರಿ ಅನಿಸಿ ಗೋವಿಂದ ಮೌನವಾಗಿದ್ದನು. "ನಿಮಗೆ ನಾನ್ ಒಂದು ಆಳು. ನಿಮಗೆ ನನ್ ಮೇಲೆ ಪೂರ್ತಿ ಹಕ್ಕಯಿತೆ. ನೀವೇ ಯಾಕೆ ಮುಂಚೆನೇ ನನ್ಹತ್ರ ಬಂದು 'ಗಂಗಿ ನಿನ್ಮ್ಯಾಕೆ ನಂಗೆ ಮನಸ್ಸಯ್ತೆ ನನ್ ಕೂಡ ಬಾ' ಅಂತ ಕರ್ದಿದ್ರೆ ನಿಮ್ ಕಾಲ್ನ ಕಣ್ಣಿಗೊತ್ಕೊಂಡು ನಿಮ್ ಸೇವೆ ಮಾಡಕ್ ಬರ್ತಿದ್ದೆ ನನ್ ಒಡೆಯ."
"ನಿಜ್ವಾಗ್ಲೂ?"
"ಹೂ ನನ್ ದೊರೆ. ನೀವ್ ಕೇಳದ ಹೆಚ್ಚಾ ನಾನ್ ನಿಮ್ ಸೇವೆ ಮಾಡೋದ್ ಹೆಚ್ಚಾ ಧಣಿ?"
"ಹೋಗ್ಲಿ ಬಿಡು ಈಗ್ಯಾಕೆ ಅದೆಲ್ಲ. ಈಗ ನಾನು ನಿಂಗೆ ಸಿಕ್ಕಿನಲ್ಲಾ, ನಂಗೆ ಏನ್ ಸೇವೆ ಮಾಡ್ತಿಯಾ ಹೇಳೇ ನನ್ ಹೆಣ್ಣೇ" ಎಂದು ಅವಳ ಸೊಂಟವನ್ನು ಎರಡೂ ಕೈಗಳಿಂದ ತಬ್ಬಿಕೊಂಡನು. ಗೋವಿಂದ "ನನ್ನ ಹೆಣ್ಣೇ " ಎಂದು ಹೇಳಿದ ತಕ್ಷಣ ಗಂಗಿಯಲ್ಲಾದ ಬದಲಾವಣೆ ಅವರ್ಣನೀಯ. ಅವಳ ನೈಸರ್ಗಿಕವಾದ ಹೆಣ್ತನದ ಚೆಲುವು, ನಾಚಿಕೆ ಪುಟಿದೆದ್ದಿತು. ಎಷ್ಟೋ ವರ್ಷಗಳಿಂದ ಅವಳು ಒಳಗೊಳಗೇ ಬಯಸಿದ್ದ ಒಂದು ಗಂಡಿನ ಸ್ವಾಮ್ಯತೆ ಮತ್ತು ಸಾಮಿಪ್ಯ ಅವಳಿಗೆ ಸಿಕ್ಕಿತ್ತು. ಗಂಗಿ ಒಡನೆಯೇ ಎದ್ದುನಿಂತು ಗೋವಿಂದನನ್ನು ತಬ್ಬಿದಳು. ಅವನ ಮುಖವನ್ನು ತನ್ನ ಎದೆಗೆ ಒತ್ತಿಕೊಂಡಳು. ಸೆರಗಿನಲ್ಲಿ ಬಂಧಿತವಾಗಿದ್ದ ತನ್ನ ಸಪುಷ್ಟ ಸ್ತನಗಳನ್ನು ಅವನ ಮುಖಕ್ಕೆ ಒತ್ತಿದಳು. ಅವನು ತನ್ನ ಕಯ್ಗಳನ್ನು ಅವಳ ಸೊಂಟದಿಂದ ಕೆಳಕ್ಕೆ ಅವಳ ಮೆತ್ತನೆಯ ನಿತಂಬಗಳ ಮೇಲೆ ಇಳಿಬಿಟ್ಟನು. ಅವಳ ಮಾಂಸಲ ಅಂಡಿನ ಮೇಲೆ ಮನ ಬಂದಂತೆ ಕೈ ಆಡಿಸಿ ಸವಿದನು.
"ಒಡೆಯಾ ನಿಮಗೇನ್ ಬೇಕೋ ಆ ಸೇವೆ ಮಾಡಕ್ಕೆ ನಾ ಇರೋದು. ಈ ಮಯಲ್ಲ ನಿಮ್ದೇಯಾ. ನನ್ನ ಏನ್ ಬೇಕಾದ್ರೂ ಮಾಡ್ರಿ ಒಡೆಯ. ನೀವೇಳಿದ್ದಕ್ಕೆ ಯಾವ್ದುಕ್ಕು ಇಲ್ಲಾ ಅನ್ನಕ್ಕಿಲ್ಲಾ ನನ್ ದ್ಯಾವ್ರೆ" ಎಂದಳು ಗಂಗಿ ನಾಚಿ ತಲೆ ತಗ್ಗಿಸಿ. ಅವಳ ಸರಳ ಮನಸ್ಸು ಗೋವಿಂದನ ಔದಾರ್ಯಕ್ಕೆ ಸೋತು ಶರಣಾಗಿತ್ತು.
ಅವಳ ಮಾತುಗಳ ಕಡೆಗೆ ಲಕ್ಷ್ಯ ಕೊಡದೆ ಅವಳ ತುಂಬು ನಿತಂಬಗಳನ್ನು ಮುಟ್ಟಿ ಸವಿಯುದರಲ್ಲಿ ಮಗ್ನನಾಗಿದ್ದನು ಗೋವಿಂದ.
"ಗಂಗಿ ಇದೆಲ್ಲ ನಂದೆಯೆನೇ?" ಎಂದು ಅವಳ ಅಂಡುಗಳ ಮೇಲೆ ಕಯ್ಯಾಡಿಸಿ ಅವಳ ಕಿಬ್ಬೊಟ್ಟೆಗೆ ಒಂದು ಮತ್ತು ಕೊಟ್ಟನು.
"ಆಹ್… ಹೂ ನನ್ ದೊರೆ ಎಲ್ಲ ನಿಮ್ದೇಯಾ !"
"ಮತ್ತೆ ಇನ್ನೂ ಯಾಕೆ ತಡ ? ಬಿಚ್ಚೆ ಇದನ್ನ ನನ್ ಗಂಗೀ !"
"ನಂಗೆ ನಾಚ್ಕೆ ನನ್ ದೊರೆ. ನೀವೇ ಬಿಚ್ರಿ."
ಅವಳು ಹೇಳಿದ್ದೆ ತಡ ಅವನು ಅವಳ ಸೆರಗಿಗೆ ಕೈ ಹಾಕಿ ಅವಳ ಸೀರೆಯನ್ನು ದರದರನೆ ಎಳೆದನು. ಗಂಗೀ ಅಸಹಾಯಕತೆಯಿಂದ ತನ್ನ ಸೀರೆಯನ್ನು ತ್ಯಜಿಸಿದಳು. ಕುಪ್ಪಸವಿಲ್ಲದ ಅವಳ ಭವ್ಯ ಸ್ತನಗಳು ಧಿಗ್ಗೆಂದು ಅವನ ಮುಂದೆ ಕಂಡವು. ಅವಳು ನಾಚಿಕೆಯಿಂದ ತನ್ನ ಕಯ್ಯನ್ನು ಅಡ್ಡ ತಂದು ಮರೆಮಾಡಿದಳು. ಗೋವಿಂದ ಅವಳ ಸೀರೆಯನ್ನು ಅನಾಯಾಸವಾಗಿ ಎಳೆದೆ ಬಿಟ್ಟನು. ತನ್ನ ಬೆತ್ತಲೆ ಮಯ್ಯನ್ನು ಅವನಿಗೆ ತೋರಿಸಲು ನಾಚಿ ಗಂಗಿ ಅವನ ಕಾಲ ಬಳಿ ಕುಸಿದು ಕೂತಳು ಕಯ್ಯಿಂದ ತನ್ನ ಮಯ್ಯ ಮುಚ್ಚಿ. ಗೋವಿಂದ ಎದ್ದು ನಿಂತನು.
"ಗಂಗಿ ಎದ್ದು ನಿಲ್ಲೆ! ನಿನ್ನನ್ನ ನೋಡ್ಬೇಕು ನಾನು." ಎಂದು ಆಜ್ನ್ಯಾಪಿಸಿದನು.
"ನಂಗೆ ನಾಚಿಕೆ ಧಣಿ." ಎಂದು ಅವಳು ಎದ್ದು ಅವನನ್ನು ಬಿಗಿದು ಅಪ್ಪಿದಳು ತನ್ನ ನಗ್ನ ಕುಚಗಳನ್ನು ಅವನೆದೆಗೆ ಒತ್ತಿ. ಆ ನಗ್ನ ಆಲಿಂಗನದಲ್ಲಿ ತನ್ನನ್ನು ತಾನು ಗೋವಿಂದನಿಗೆ ನಿವೇದಿಸಿಕೊಂಡಳು.
ಕತ್ತಲೆಯಾಗಿತ್ತು. ಕೋಣೆಯಲ್ಲಿ ಒಂದು ಸಣ್ಣ ದೀಪ ಉರಿಯುತ್ತಿತ್ತು. ಗೋವಿಂದ ತಡ ಮಾಡಲಿಲ್ಲ. ಅವಳನ್ನು ಮಂಚದ ಮೇಲೆ ಮಲಗಿಸಿ ತಾನು ಮಲಗಿದ. ಅವಳ ಕಾಲನ್ನು ಅಗಲಿಸಿ ತನ್ನ ಪಂಚೆಯನ್ನು ಮೇಲೆತ್ತಿ, ಅರಳಿದ ತನ್ನ ಮದನ ದಂಡವನ್ನು ಅವಳ ಯೋನಿಗೆ ಸ್ಪರ್ಶಿಸಿದ. ಅವಳು ಸಂಪೂರ್ಣ ಒದ್ದೆಯಾಗಿದ್ದಳು. ಅವನಿಗೆ ತಡೆಯಲು ಸಾಧ್ಯವಾಗಲಿಲ್ಲ. ಅವಳ ಯಥೇಚ್ಛವಾದ ಸೌಂದರ್ಯವನ್ನಾಗಲಿ, ಅವಳ ನಗ್ನತೆಯನ್ನಾಗಲಿ, ಅವಳ ಸ್ತ್ರೀಸಹಜ ಅಸಹಾಯಕತೆಯನ್ನಾಗಲಿ ಸವಿಯುವ ವ್ಯವಧಾನ ಗೋವಿಂದನಲ್ಲಿರಲಿಲ್ಲ. ವಯಸ್ಸಿಗೆ ಬಂದಾಗಿನಿಂದ ಹೆಣ್ಣಿನ ಸ್ಪರ್ಶವನ್ನೇ ಅರಿಯದ ಅವನಿಗೆ ಅವಳನ್ನು ಅನುಭವಿಸಿಬಿಡಬೇಕೆಂಬ ಕಾತರ. ಗಂಗಿ ತನ್ನ ಸರ್ವಸ್ವವನ್ನೂ ಗೋವಿಂದನಿಗೆ ಅರ್ಪಿಸಿ ಅವನಿದಿರು ಕಾಲು ಅಗಲಿಸಿ ಮಲಗಿದ್ದಳು ಅವನ ನಿರೀಕ್ಷೆಯಲ್ಲಿ. ಗೋವಿಂದ ಅವಳನ್ನು ಸರಾಗವಾಗಿ ಸೇರಿದನು. ತನ್ನ ಮದನದಂಡವನ್ನು ಅವಳಲ್ಲಿ ತೂರಿ ಅವಳ ದ್ವಾರದಲ್ಲಿ ಹೊಕ್ಕನು. ಅವಳ ಮೃದುವಾದ ಒದ್ದೆಯಾದ ಒಡಲನ್ನು ತನ್ನ ಲೋಹದಂತಿದ್ದ ಅಂಗದಿಂದ ಆಕ್ರಮಿಸಿದನು. ಅವರಿಬ್ಬರ ಆಟಕ್ಕೆ ಮರದ ಹಳೆಯ ಮಂಚ ಕಿರ್ರೋ ಎಂದು ಸಪ್ಪಳ ಮಾಡಲು ಪ್ರಾರಂಭಿಸಿತು. ಅವನ ಪ್ರತಿಯೊಂದು ಹೊಡೆತವೊ ಹಿಂದಿನದಕ್ಕಿಂತ ಜೋರಾಗುತ್ತಾ ಹೋಯಿತು. ಅವಳು ನಾಚಿಕೆಯಿಂದ ಕಣ್ಣು ಮುಚ್ಚಿ ಅವನ ಕಬ್ಬಿಣದಂತೆ ಗಟ್ಟಿಯಾಗಿದ್ದ ಲಿಂಗವನ್ನು ತನ್ನ ಆಳಕ್ಕೆ ಸ್ವೀಕರಿಸಿ ಕಾಮಾಸಕ್ತಿಯ ಹೂಂಕಾರಗಳನ್ನು ಮಾಡಲಾರಂಭಿಸಿದಳು. ಅವಳ ಮೃದುವಾದ ಸೊಂಟವನ್ನು ಹಿಸುಕಿ ಅವಳ ಸಂಪೂರ್ಣ ಮಯ್ಯನ್ನು ಅವಳು ಮಿಸುಕಾಡದಂತೆ ತನ್ನ ಹತೋಟಿಯಲ್ಲಿತುಕೊಂಡಿದ್ದನು. ಅವನ ಮದನದಂಡ ಅವಳ ಆಳಕ್ಕೆ ಇಳಿದು ಅವಳ ಗರ್ಭವನ್ನೇ ಸ್ಪರ್ಶಿಸಿತು ಎಂಬಂತೆ "ಆಹ್.. ನನ್ನೊಡೆಯ.. ನನ್ ಧಣಿ.. ನನ್ ದ್ಯಾವ್ರೆ.. ನನ್ ದೊರೆ " ಎಂದೆಲ್ಲ ಗೋವಿಂದನಿಗೆ ಭಯ ಭಕ್ತಿಗಳಿಂದಲೇ ವಂದಿಸುತ್ತಿದ್ದಳು. ಅಂಥ ಸುಖದಲ್ಲೂ ಅವಳು ತಾನು ಗೋವಿಂದನ ಆಳು ಎಂಬ ಅಂತಸ್ತಿನ ಅಂತರವನ್ನು ಮರೆಯದೆ ಗೌರವ ಸೂಚಿಸುತ್ತಿದ್ದಳು. ಅವನ ಸಾಮೀಪ್ಯದಲ್ಲಿ ಗಂಗೀ ಇಡೀ ಜಗವನ್ನೇ ಮರೆತು ಪುರುಷತ್ವದ ಸವಿಯನ್ನು ಅನುಭವಿಸಿದಳು. ಗೋವಿಂದ ತನ್ನ ಶಕ್ತಿ ಮೀರಿ ತನ್ನ ಸ್ಖಲನವನ್ನು ಹಿಡಿದಿಟ್ಟುಕೊಂಡಿದ್ದನು. ವರ್ಷಗಳಿಂದ ಬ್ರಹ್ಮಚಾರಿಯಾಗಿದ್ದ ಅವನಿಗೆ ತಡೆಯಲು ಸಾಧ್ಯವಾಗಲಿಲ್ಲ. "ಆಹ್ ಗಂಗೀ.." ಎಂದು ಹೂಂಕರಿಸಿ ಅವಳ ಯೋನಿಯಾಳದಲ್ಲಿ ಸ್ಖಲಿಸಿ ಅವಳ ಮೇಲೆ ಕುಸಿದನು. ತನ್ನ ಒಡೆಯನ ವೀರ್ಯ ಪ್ರಸಾದವನ್ನು ಸ್ವೀಕರಿಸಿ ಧನ್ಯತೆ ಮತ್ತು ಹಿಂದೆಂದೂ ಕಾಣದಿದ್ದಂಥ ಶಾಂತಿಯಿಂದ ಆ ಅಮೋಘ ಕ್ಷಣವನ್ನು ಅನುಭವಿಸಿದಳು ಗಂಗೀ.
ಗೋವಿಂದ ಸ್ವಲ್ಪ ಸಮಯದ ನಂತರ ಎದ್ದು ಮಂಚದ ತುದಿಯಲ್ಲಿ ಮೌನವಾಗಿ ಕುಳಿತನು. ಗಂಗಿಯೂ ಮಂಚದ ತುಂಬೆಲ್ಲ ಹರಡಿದ್ದ ಅವಳ ಸೀರೆಯನ್ನು ಎಳೆದು ತೆಗೆದು ಕೊಂಡಳು. ಅವಳ ನಗ್ನತೆಯನ್ನು ಮುಚ್ಚಲು ಹರಸಾಹಸ ಪಡುತ್ತಿರುವದನ್ನು ಕಂಡು ಗೋವಿಂದನೂ ತನ್ನ ಪಂಚೆಯನ್ನು ಸರಿಮಾಡಿಕೊಂಡು ಕುಳಿತನು. ಗಂಗೀ ಅರೆಬರೆಯಾಗಿಯೇ ತನ್ನ ಸೀರೆಯನ್ನು ಸುತ್ತಿಕೊಂಡು ಅವಸರದಲ್ಲಿ ಕೋಣೆಯ ಬಾಗಿಲೆಡೆಗೆ ನಡಿದಳು.
"ಗಂಗೀ ಎಲ್ ಹೋಗತಿದಿ ಬಾ ಇಲ್ಲಿ."
ಗಂಗೀ ಉತ್ತರಿಸದೆ ನಿಂತಳು. "ಬಾ ಇಲ್ ಕುತ್ಕೋ ಬಾರೆ" ಎಂದು ತನ್ನ ಪಕ್ಕದಲ್ಲಿ ಕೂರುವಂತೆ ಸನ್ನೆ ಮಾಡಿದನು. ಅವನ ಧ್ವನಿಯಲ್ಲಿ ಮೊದಲಿನಗಿಂತ ಹೆಚ್ಚಿನ ಪ್ರೀತಿ ದೈನ್ಯ ತುಂಬಿತ್ತು. ಅವಳು ಮೆಲ್ಲನೆ ತನ್ನ ಸೀರೆಯನ್ನು ಸರಿ ಮಾಡಿಕೊಳ್ಳುತ್ತ ನಡಿದು ಗೋವಿಂದನೆಡೆಗೆ ಬಂದಳು.
"ನಾ ಇಲ್ಲೇ ಕೊಡ್ತೀನಿ ಧಣಿ" ಎಂದು ಅವನ ಕಾಲ ಬಳಿಯೇ ಕುಳಿತಳು.
"ಗಂಗೀ.. ನಿಂಗೆ ಇಷ್ಟ ಆಗ್ಲಿಲ್ಲ ಅಂತ ಕಾಣ್ತದೆ"
"ಅಯ್ಯೋ ಬಿಡ್ತು ಅನ್ರಿ ಧಣಿ. ಯಾಕ್ ಹಂಗ್ ಮಾತಾಡೀರಿ."
"ಮತ್ತೆ.. ಹಂಗೆ ಸೀರೆ ಸುತ್ಕೊಂಡ್ ಸರ ಸರ ಅಂತ ಓಡ್ತಿದೀಯಾ? "
"ನಂಗೆ ಏನ್ ಮಾಡಬೇಕು ಅಂತ ಗೊತ್ತಾಗ್ಲಿಲ್ಲ ಧಣಿ. ನಿಮ್ ಸೇವೆ ಮಾಡಾಕೆ ಸಿಕ್ಕಿದ್ದು ನನ್ ಬಾಗ್ಯ ನನ್ ಧಣಿ. ಏಟೋ ವರ್ಷದಿಂದ ಸುಖ ಕಾಣದ ಹೆಣ್ಣು ನಾನು. ನೀವ್ ಕೊಟ್ಟಿದ್ ಸುಖ ಎಂಗೆ ಅಂತ ಹೇಳ್ಲಿ ಧಣಿ. ದೇವ್ರು ನೀವು ಈ ಹೆಣ್ಣಿಗೆ ನನ್ ದೊರೆ. ನನ್ನಿಂದೇನಾದ್ರು ತೆಪ್ಪಾಗ್ದ್ರೆ ಹೊಟ್ಟೆಗ್ ಹಾಕಾಳಿ ನನ್ನ ದೊರೆ " ಎಂದು ಕೈ ಜೋಡಿಸಿದಳು ಗಂಗೀ ವಿನಮ್ರವಾಗಿ.
"ಹುಚ್ಚಿ.. ಹುಚ್ಚಿ. ಎಂಥ ಸುಂದ್ರಿ ನೀನು. ನಿನ್ ಮಯ್ಯಾಗೆ ಅಮೃತ ಇಟ್ಟಿಯೇ ಗಂಗೀ ನೀನು. ನಾನು ಎಲ್ಲಾ ಮರ್ತ್ಬಿಟ್ಟಿದೆ ಕಣೆ ನಿನ್ನ ಒಳಗೆ. ನೀನಲ್ದೆ ಹೋಗಿದ್ರೆ ನಂಗೆ ಈ ಥರ ಸುಖ ಯಾರ್ ಕೊಡ್ತಿದ್ರು ಕಣೆ."
"ಹಂಗೇಳ್ಬ್ಯಾಡ್ರಿ ನನ್ ದೊರೆ. ನೀವು ಈ ಹಳ್ಳಿಗೆ ಯಜಮಾನ್ರು. ನೋಡಕ್ಕೆ ಕಟ್ಟುಮಸ್ತಾಗಿದೀರಾ. ನೀವ್ ಮನಸ್ ಮಾಡಿದ್ರೆ ಯಾವ್ ಹೆಣ್ಣನ್ನು ಬೇಕಾದ್ರು ನಿಮ್ ಮಂಚಕ್ಕೆ ಕರ್ಕೊಂಡು ಬರ್ಬಹುದು. ನೀವು ಹಂಗೆಲ್ಲಾ ಮಾಡ್ಲಿಲ್ಲ." ಎಂದು ನಾಚಿ ನುಡಿದಳು
"ಹೋಗ್ಲಿ ಬಿಡು ಈಗ್ಯಾಕ್ ಅದೆಲ್ಲ. ಎಷ್ಟ್ ಚಂದ ಕಾಣಿಸ್ತೀಯೆ ಗಂಗೀ ನೀನು ನಾಚ್ಕೊಂಡಾಗ. ನಿನ್ನ ನೋಡ್ತಾನೆ ಇರ್ಬೇಕು ಅನ್ಸುತ್ತೆ ಕಣೆ. ನೀನು… ನೀನು.." ತಡವರಿಸಿದನು ಗೋವಿಂದ.
"ಏನ್ ಹೇಳ್ರಿ ಒಡೆಯ"
"ನೀನು ಮತ್ತೆ ಹಿಂಗೇ… " ಹಿಂಜರಿದು ಮೌನವಾದನು. ಅವನ ಇಂಗಿತವನ್ನು ಅರ್ಥ ಮಾಡಿಕೊಂಡ ಗಂಗೀ ಒಡನೆಯೇ ನುಡಿದಳು.
"ನಾನ್ ಮತ್ತೆ ನಿಮಗೆ ಈ ಥರ ಸುಕ ಕೊಡ್ತಿನೋ ಇಲ್ಲೋ ಕೇಳ್ತಿದೀರಾ ಬುದ್ಧಿ? "
ಗೋವಿಂದ ಹೌದು ಎಂಬಂತೆ ನಿರ್ಲಜ್ಜನಾಗಿ ತಲೆ ಅಲ್ಲಾಡಿಸಿದನು.
ಗಂಗಿಯ ಕಣ್ಣಂಚಿನಲ್ಲಿ ತೇವವಿತ್ತು. ಅವನ ಕಾಲನ್ನು ಬಿಗಿದು ಹಿಡಿದಳು.
"ಯಾಕ್ ಗಂಗೀ. ಬೇಜಾರಾಯ್ತೆನೆ ಹಂಗ್ ಕೇಳಿದ್ದಕ್ಕೆ? ನಿಂಗಿಷ್ಟಿಲ್ಲ ಅಂದ್ರೆ ಬ್ಯಾಡ "
"ಅಯ್ಯೋ ನನ್ ಒಡೆಯ. ನಿಮ್ಮನ್ ಬಿಟ್ರೆ ನಂಗ್ಯಾರ್ರ್ ದಿಕ್ಕು. ನನ್ ಧಣಿ ನನ್ ವಯಸ್ಸಿರೋ ಗಂಟ ನಿಮ್ ಸೇವೆ ಮಾಡ್ಕಂಡಿರ್ತೀನಿ. ನನ್ ಜೀವ ಇರೊಗಂಟ ನಿಮ್ ಜೀತ ಮಾಡ್ತೀನಿ. ನೀವ್ ಕೇಳೋದ್ ಹೆಚ್ಚಾ ನಾನ್ ಬರೋದ್ ಹೆಚ್ಚಾ? ಆದ್ರೆ ನಾ ನಿಮ್ಮ್ನ ಕೇಳೋದು ಒಂದೇ. ನನ್ ಕೈ ಬಿಡಬ್ಯಾಡ್ರಿ ಒಡೆಯ. ನೀವ್ ನಾಳೆ ಮದುವೆ ಗಿದುವೆ ಆದ್ರೆ ನನ್ನೂ ಇಟ್ಕಳ್ರಿ ಧಣಿ. ನಿಮಗೇನ್ ಸೇವೆ ಬೇಕೋ ನಾನ್ ಮಾಡ್ತೀನಿ. ನೀವ್ ಹೇಳಿದ್ದ ಕೇಳ್ಕೊಂಡು ಇರ್ತೀನಿ ಹಿಂಗೇ ನಿಮ್ ಕಾಲ್ ಹತ್ರ ದೊರೆ "
"ನೀನೊರೋವಾಗ ನಂಗ್ಯಾಕೆ ಇನ್ನೊಂದು ಹೆಣ್ಣು. ಅಷ್ಟಕ್ಕೂ ನಂಗ್ಯಾರ್ ಹೆಣ್ಣು ಕೊಟ್ಟಾರು. ನಿನ್ನ ಯಾವತ್ತೂ ಬಿಡಾಕಿಲ್ಲ ಗಂಗೀ. ಬಾರೆ ಇಲ್ಲಿ. ನಿನ್ ಜಾಗ ಅಲ್ಲಲ್ಲ. ಇಲ್ಲಿ" ಎಂದು ಅವಳನ್ನು ಮೇಲೆಳೆದು ಬಿಗಿದಪ್ಪಿದನು. ಅವಳು ತನ್ನ ಅರೆಬರೆ ಸೀರೆ ಸುತ್ತಿಕೊಂಡೇ ಅವನನ್ನು ಗಟ್ಟಿಯಾಗಿ ತಬ್ಬಿದಳು. ಅವಳ ಕಣ್ಣೊರೆಸಿದನು.
"ನಿಮ್ ಕಾಲು ಹೆಂಗೈತೆ ಧಣಿ?"
"ನೀನ್ ನನ್ ಕಾಲ್ ಹಿಡಿದು ಹಿಡಿದು ಮತ್ತೆ ನೋವು ಮಾಡ್ಬಿಟ್ಟೆ ಕಣೆ "
"ಅಯ್ಯೋ ಸಿವ ಸಿವಾ. ನನ್ ಬುದ್ಧಿಗಿಷ್ಟು. "
"ಸುಮ್ನೆ ತಮಾಸೆಗೆ ಹಂಗಂದೆ. ನೀನು ಕೊಟ್ಟ ಸುಖದಲ್ಲಿ ಕಾಲ್ ನೋವೆಲ್ಲಾ ಹೋಗೆ ಬಿಡ್ತು ನೋಡು."
"ಯಾವಾಗ್ಲೂ ತಮಾಸೇನೆಯ ನಿಮ್ದು" ಎಂದು ಅವನ ಎದೆಗೆ ಮೆಲ್ಲಗೆ ಗುದ್ದಿದಳು.
"ನಿಜ ಕಣೆ. ಅಷ್ಟಕ್ಕೂ ಈ ಕಾಲ್ ಹಿಂಗಾಗಿದ್ರಿಂದಾನೆ ಅಲ್ಲಾ ನೀನ್ ನಂಗೆ ಸಿಕ್ಕಿದ್ದು. " ಎಂದು ಅವಳ ಸೊಂಟವನ್ನು ಮೃದುವಾಗಿ ಹಿಸುಕಿ ತನ್ನೆದೆಗೆ ಅಂತ ಅವಳನ್ನು ಮತ್ತೆ ಗಟ್ಟಿಯಾಗಿ ಒತ್ತಿಕೊಂಡನು.
"ಬುದ್ಧಿ ನೀವಿಂಗೇ ಸರ್ಸ ಮಾಡ್ತಿರೋ ಇಲ್ಲಾ ಸ್ವಲ್ಪ ಊಟ ಗೀಟ ಮಾಡ್ತಿರೋ? ನಿಮಗೋಸ್ಕರ ಸೀ ಮಾಡಿವ್ನಿ."
"ಇಷ್ಟೊತ್ತು ಕೊಟ್ಟೆಯಲ್ಲೇ ಸೀಯಾ. ಮಂಚದ್ ಮ್ಯಾಲೆ. ಹೊಟ್ಟೆ ತುಂಬಿಹೋಗ್ಯದ ಗಂಗೀ."
"ಚೀ ಚೀ. ಹೋಗ್ರಿ ಧಣಿ. ಏನೇನೋ ಹೇಳ್ತೀರಾ. ಬನ್ನಿ ಊಟ ಬಡುಸ್ತೀನಿ."
"ಬಾ. ನೀನು ಉಣ್ಣೇ ಗಂಗೀ."
"ಮದ್ಲು ನೀವು. ಆಮೇಲೆ ನಾನು ಉಣ್ತೀನಿ ಒಡೆಯ. ನಿಮ್ ಸರಿಗೆ ಊಟ ಮಾಡೋದಾ? "
"ಅದೆಲ್ಲ… "
"ಸುಮ್ಕಿರಿ ಧಣಿ. ಗೊತ್ತು ನೀವ್ ಹೇಳದು. ನಂಬಿಕೆ ಇಲ್ಲಾ ಅಂತೆಲ್ಲ. ನಂಗ್ ನಂಬಿಕೆ ಐತೇ. " ಎಂದು ಊಟ ಬಡಸಿದಳು.
ಊಟ ಮಾಡಿ ಎದ್ದನು ಗೋವಿಂದ.
ಗಂಗೀ ತರಾತುರಿಯಲ್ಲಿ ಉಳಿದ ಅಡುಗಎಲ್ಲವನ್ನು ತೆಗೆದು ತನ್ನ ಬಿಡಾರಕ್ಕೆ ಹೊರಡಲು ಸಿದ್ಧವಾದಳು. ತನ್ನೊಡನೆ ಇಡೀ ರಾತ್ರಿ ಕಳೆಯಲು ಮುಜುಗರವಾಗಬಹುದೆಂದು ಗೋವಿಂದನು ಅವಳನ್ನು ತಡೆಯಲು ಹೋಗಲಿಲ್ಲ.
ಕತ್ತಲಲ್ಲಿ ತನ್ನ ಬಿಡಾರಕ್ಕೆ ಬಂದಳು ಗಂಗೀ. ಆ ದಿನ ನಡೆದ ಘಟನೆಯಿಂದ ಅವಳು ಅವಳಾಗಿರಲಿಲ್ಲ. ಗೋವಿಂದ ಊಟ ಮಾಡಿದ ಎಲೆಯನ್ನೇ ತೆಗೆದುಕೊಂಡು ಬಂದಿದ್ದಳು. ಅದರಲ್ಲಿ ತನ್ನ ಊಟ ಬಡಿಸಿಕೊಂಡು ತಿಂದಳು. ಅವನ ಎಲೆಯಲ್ಲೇ ತಿನ್ನುವಾಗ ಅವಳಲ್ಲಿ ನಾಚಿಕೆ ಮನೆ ಮಾಡಿತ್ತು. ಹಳ್ಳಿಯ ಯಾವ ಹೆಣ್ಣಿಗೂ ಸಿಗದ ಪರಮ ಭಾಗ್ಯ ತನ್ನ ಪಾಲಿಗೆ ಬಂದಿತಲ್ಲ ಎಂಬ ಸಂತೋಷ, ಬಹು ದಿನಗಳಿಂದ ಕಾಡುತ್ತಿದ್ದ ಒಂಟಿತನದ ನೋವು ಇನ್ನು ಮುಂದೆ ಇರುವುದಿಲ್ಲವೆಂಬ ಸಮಾಧಾನ. ಊಟ ಮುಗಿಸಿ ಮಲಗಿದಳು. ಅವಳ ಪ್ರಸ್ತ, ಮೊದಲ ರಾತ್ರಿಯ ನೆನಪಾಗಿ ತುಸು ದುಃಖ ಪಟ್ಟಳು. ಗೋವಿಂದನ ನೆನಪಿನ ಗುಂಗಿನಲ್ಲಿ, ಅವತ್ತಿನ ಅವರ ಕಾಮದಾಟದ ನೆನಪಿನಲ್ಲೇ ಎಲ್ಲವನ್ನು ಮರೆತು ಮಲಗಿದಳು. ಆ ರಾತ್ರಿ ಅವರ ಸರಸದ ಕ್ಷಣಗಳಲ್ಲಿ ಒಂದು ಘಟನೆ ಅವಳ ಮನಸ್ಸಿಗೆ ಮತ್ತೆ ಮತ್ತೆ ಬಂದು ಅವಳಿಗೆ ಮುದ ನೀಡುತಿತ್ತು. ಗೋವಿಂದ ಅವಳನ್ನು "ನನ್ ಹೆಣ್ಣೇ" ಎಂದು ಕರೆದದ್ದು ನೆನೆದು ಮಗ್ಗಲು ಬದಲಿಸುತ್ತಾ ನಾಚಿ ಮುಗುಳ್ನಗುತ್ತಿದ್ದಳು. ಅವಳ ಅವ್ಯಕ್ತ ಬಯಕೆಗಳಿಗೆ ಪುನಃ ರೆಕ್ಕೆಗಳು ಬಂದಂತಾಗಿತ್ತು.
ಚೆನ್ನಿ ಕೊನೆಗೂ ಗೂಳಿಹಿತ್ತಲಿನ ಹತ್ತಿರ ಬಂದಳು. ಮಧ್ಯಾಹ್ನದ ಉರಿಬಿಸಿಲಿನಲ್ಲಿ ಬಳಲಿದ್ದಳು. ತನ್ನ ಸಖಿ ಗಂಗಿಗೆ ಒದಗಿದ್ದ ಕಷ್ಟದ ಬಗ್ಗೆ ಮಾತನಾಡಿಸಿಲು ನಿರ್ಧರಿಸಿದ್ದಳು. ಆದರೆ ಅಲ್ಲಿ ಅವಳಿಗೊಂದು ಆಶ್ಚರ್ಯ ಕಾದಿತ್ತು.
ಕಾಮೆಂಟ್ಗಳು
ಕಾಮೆಂಟ್ ಪೋಸ್ಟ್ ಮಾಡಿ